ದೆಹಲಿ ವಾಯು ಮಾಲಿನ್ಯ- ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಭಾರತದ ನಗರಗಳಲ್ಲಿ ಇನ್ನೂ ಕೆಲವು ತಿಂಗಳು ವಾಯು ಗುಣಮಟ್ಟ ಕಳಪೆ: ಅಮೆರಿಕ ಹವಾಮಾನ ಸಂಘಟನೆ

ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು...

ವಾಷಿಂಗ್ ಟನ್: ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು ಅಮೆರಿಕಾದ ಉನ್ನತ ಹವಾಮಾನ ಸಂಘಟನೆ ಹೇಳಿದೆ, ಇದು ಜನರ ಆರೋಗ್ಯದ ಮೇಲೆ ಅಪಾಯಕರವಾಗಿ ಪರಿಣಮಿಸಲಿದೆ ಎಂದು ಸಂಸ್ಥೆಯ  ವರದಿಯಲ್ಲಿ ಹೇಳಲಾಗಿದೆ.
"ಉತ್ತರ ಭಾರತ ಹಾಗು ಪಾಕಿಸ್ತಾನದಲ್ಲಿ ಇದೀಗ ತಾನೆ ಮಂಜಿನ ಋತು  ಪ್ರಾರಂಭವಾಗಿದೆ. ಇದೀಗ ತಾನೆ ಮುಂಗಾರು ಕಳೆದು ಚಳಿಗಾಲ ಪ್ರಾರಂಭವಾಗಬೇಕಿದೆ. ಇದರ ಅರ್ಥ ಶೀತ ಗಾಳಿಯಲ್ಲಿ ಮಾಲಿನ್ಯವೂ ಸೇರಿ ಜನರ ಆರೋಗ್ಯದ ಮೇಲೆ ಅತೀವ ದುಷ್ಪರಿನಾಮ ಬೀರಲಿದೆ" ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಸಂಸ್ಥೆ (ಎನ್ ಓ ಎ ಎ) ಹೇಳಿಕೆಯಲ್ಲಿ ತಿಳಿಸಿದೆ.
ಎನ್ ಓ ಎ ಎ ಬಿಡುಗಡೆಗೊಳಿಸಿದ ಉಪಗ್ರಹ ಚಿತ್ರಗಳು ಮತ್ತು ಉತ್ತರ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಭಾಗಗಳಲ್ಲಿ ಇಂತಹ ಮಾಲಿನ್ಯ ವಾತಾವರಣದ ಕಾರಣಗಳನ್ನು ವಿವರಿಸಿದೆ. ಇಂಧನಗಳ ದಹನದಿಂದ ಉಂಟಾಗುವ ವ್ಯಾಪಕ ಹೊಗೆ, ಮತ್ತು ಹುಲ್ಲು, ಕಳೆಗಳನ್ನು  ಸುಡುವ ಕಾರಣದಿಂದ ಉತ್ತರ ಭಾರತ ಮತ್ತು ಪಾಕಿಸ್ತಾನದ ನಗರಗಳಲ್ಲಿ ವಾತಾವರಣ ಅಪಾಯಕಾರಿಯಾಗಿದೆ ಎಂದು ಅದು ಹೇಳಿದೆ.
ವಾತಾವರಣದಲ್ಲಿ ವಿಲೋಮ ಪದರವಿರುವ ಸಮಯದಲ್ಲಿ ಈ ದಟ್ಟ ಹೊಗೆಪೂರಿತ ವಿಷಕಾರಿ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎನ್ ಓಓಎ ತಿಳಿಸಿದೆ. ವಾಯುಮಂಡಲದಲ್ಲಿ ಸಾಕಷ್ಟು ಗಾಳಿಯ ಚಲನೆ ಇಲ್ಲದ ಸಮಯದಲ್ಲಿ ಸಂದರ್ಭಗಳಲ್ಲಿ ವಿಲೋಮದ ಪದರವು ಉಂಟಾಗುತ್ತದೆ.
ನವದೆಹಲಿ ಮತ್ತು ಉತ್ತರ ಭಾರತದ ಅನೇಕ ಇತರ ರಾಜ್ಯಗಳಲ್ಲಿ ಒಂದು ವಾರದಿಂದ ದಟ್ಟ ಹೊಗೆ ಸಹಿತ ವಿಷಗಾಳಿ ಆವರಿಸಿದೆ. ಇದಕ್ಕಾಗಿ ಕಟ್ಟಡ ನಿರ್ಮಾಣ, ಇಟ್ಟಿಗೆ ಸುಡುವುದು ಸೇರಿ ಅನೇಕ ಹೊಗೆ, ಮಾಲಿನ್ಯಕಾರಕ ಕಾರ್ಯಗಳನ್ನು ನಿಷೇಧಿಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT