ದೇಶ

ನಟಿ ದೀಪಿಕಾ ಅವರನ್ನು ಜೀವಂತವಾಗಿ ಸುಟ್ಟರೆ ರೂ.1 ಕೋಟಿ ಬಹುಮಾನ: ಎಬಿಕೆಎಂ ಘೋಷಣೆ

Manjula VN
ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ವಿವಾದ ಬಗೆಹರಿಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ದಿನದಿಂದ ದಿನಕ್ಕೆ ಚಿತ್ರಕ್ಕೆ ವಿರೋಧ ಹಾಗೂ ಬೆದರಿಕೆಗಳು ಹೆಚ್ಚುತ್ತಲೇ ಇವೆ. 
ನಿರ್ದೇಶಕ ಸಂಜಯ್ ಲೀಲಾ ಬನ್ಲಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ತಲೆಗೆ ನಿನ್ನೆಯಷ್ಟೇ ಹರಿಯಾಣದ ಬಿಜೆಪಿ ನಾಯಕರೊಬ್ಬರೂ ರೂ.10 ಕೋಟಿ ಇನಾಮು ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸಂಘಟನೆಯ ನಾಯಕರೊಬ್ಬರು ದೀಪಿಕಾ ಅವರನ್ನು ಸಜೀವವಾಗಿ ಸುಟ್ಟವರಿಗೆ ರೂ.1 ಕೋಟಿ ಬಹುಮಾನ ನೀಡಿವುದಾಗಿ ಘೋಷಣೆ ಮಾಡಿದ್ದಾರೆ.
ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ (ಎಬಿಕೆಎಂ) ಯುವ ಘಟಕದ ನಾಯಕ ಭುವನೇಶ್ವರ್ ಸಿಂಗ್ ಅವರು, ದೀಪಿಕಾ ಅವರನ್ನು ಸಜೀವವಾಗಿ ಸುಟ್ಟರೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 
ರಾಣಿ ಪದ್ಮಾವತಿಯವರ ತ್ಯಾಗ ದೀಪಿಕಾ ಅವರಿಗೆ ತಿಳಿದಿಲ್ಲ. ಸಜೀವವಾಗಿ ಸುಡುವಾಗ ಆಗುವ ನೋವು ಹೇಗಿರುತ್ತದೆ ಎಂಬುದು ದೀಪಿಕಾಗೆ ಅರ್ಥವಾಗಬೇಕಿದೆ. ಹೀಗಾಗಿ ನಟಿ ದೀಪಿಕಾ ಅವರನ್ನು ಸಜೀವವಾಗಿ ಸುಟ್ಟವರಿಗೆ ರೂ.1 ಕೋಟಿ ಬಹುಮಾನವನ್ನು ನೀಡುತ್ತೇನೆಂದು ಹೇಳಿದ್ದಾರೆ. 
SCROLL FOR NEXT