ನಟಿ ದೀಪಿಕಾ ಪಡುಕೋಣೆ 
ದೇಶ

ನಟಿ ದೀಪಿಕಾ ಅವರನ್ನು ಜೀವಂತವಾಗಿ ಸುಟ್ಟರೆ ರೂ.1 ಕೋಟಿ ಬಹುಮಾನ: ಎಬಿಕೆಎಂ ಘೋಷಣೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ವಿವಾದ ಬಗೆಹರಿಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ದಿನದಿಂದ ದಿನಕ್ಕೆ ಚಿತ್ರಕ್ಕೆ ವಿರೋಧ ಹಾಗೂ ಬೆದರಿಕೆಗಳು ಹೆಚ್ಚುತ್ತಲೇ ಇವೆ...

ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ವಿವಾದ ಬಗೆಹರಿಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ದಿನದಿಂದ ದಿನಕ್ಕೆ ಚಿತ್ರಕ್ಕೆ ವಿರೋಧ ಹಾಗೂ ಬೆದರಿಕೆಗಳು ಹೆಚ್ಚುತ್ತಲೇ ಇವೆ. 
ನಿರ್ದೇಶಕ ಸಂಜಯ್ ಲೀಲಾ ಬನ್ಲಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ತಲೆಗೆ ನಿನ್ನೆಯಷ್ಟೇ ಹರಿಯಾಣದ ಬಿಜೆಪಿ ನಾಯಕರೊಬ್ಬರೂ ರೂ.10 ಕೋಟಿ ಇನಾಮು ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸಂಘಟನೆಯ ನಾಯಕರೊಬ್ಬರು ದೀಪಿಕಾ ಅವರನ್ನು ಸಜೀವವಾಗಿ ಸುಟ್ಟವರಿಗೆ ರೂ.1 ಕೋಟಿ ಬಹುಮಾನ ನೀಡಿವುದಾಗಿ ಘೋಷಣೆ ಮಾಡಿದ್ದಾರೆ.
ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ (ಎಬಿಕೆಎಂ) ಯುವ ಘಟಕದ ನಾಯಕ ಭುವನೇಶ್ವರ್ ಸಿಂಗ್ ಅವರು, ದೀಪಿಕಾ ಅವರನ್ನು ಸಜೀವವಾಗಿ ಸುಟ್ಟರೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 
ರಾಣಿ ಪದ್ಮಾವತಿಯವರ ತ್ಯಾಗ ದೀಪಿಕಾ ಅವರಿಗೆ ತಿಳಿದಿಲ್ಲ. ಸಜೀವವಾಗಿ ಸುಡುವಾಗ ಆಗುವ ನೋವು ಹೇಗಿರುತ್ತದೆ ಎಂಬುದು ದೀಪಿಕಾಗೆ ಅರ್ಥವಾಗಬೇಕಿದೆ. ಹೀಗಾಗಿ ನಟಿ ದೀಪಿಕಾ ಅವರನ್ನು ಸಜೀವವಾಗಿ ಸುಟ್ಟವರಿಗೆ ರೂ.1 ಕೋಟಿ ಬಹುಮಾನವನ್ನು ನೀಡುತ್ತೇನೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT