ದೇಶ

ತಿರುಮಲ ದೇವಾಲಯಕ್ಕೆ ಶ್ರೀಲಂಕಾ ಅಧ್ಯಕ್ಷರ ಭೇಟಿ

Srinivas Rao BV
ತಿರುಪತಿ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಪತ್ನಿ ಜಯಂತಿ ಪುಷ್ಪ ಕುಮಾರಿ ಹಾಗೂ ಪುತ್ರ ದಹಮ್ ಸಿರಿಸೇನಾ ಅವರೊಂದಿಗೆ ಆಗಮಿಸಿದ್ದ ಮೈತ್ರಿಪಾಲ ಸಿರಿಸೇನಾ, ಸುಪ್ರಭಾತ ಸೇವೆಯ ಅವಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶ್ರೀಲಂಕಾ ಅಧ್ಯಕ್ಷರನ್ನು ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್ ಹಾಗೂ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಶ್ರೀನಿವಾಸ ರಾಜು ಸ್ವಾಗತಿಸಿದ್ದು, ದರ್ಶನದ ಬಳಿಕ ಪ್ರಸಾದ ನೀಡಿದ್ದಾರೆ. ಟಿಟಿಡಿ ಅಧಿಕಾರಿಗಳು ಸಿರಿಸೇನಾ ಅವರಿಗೆ ದೇವಾಲಯದ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದ್ದಾರೆ. 
SCROLL FOR NEXT