ಸಂಗ್ರಹ ಚಿತ್ರ 
ದೇಶ

ಕರು ಹತ್ಯೆ: ಪಾಪ ಪರಿಹಾರಕ್ಕೆ ಭಿಕ್ಷೆ ಬೇಡಿ, ಗಂಗಾ ಸ್ನಾನ ಮಾಡುವಂತೆ ಮಹಿಳೆಗೆ ಶಿಕ್ಷೆ ನೀಡಿದ ಪಂಚಾಯತ್!

ಕರುವೊಂದರ ಆಕಸ್ಮಿಕ ಸಾವಿಗೆ ಕಾರಣವಾದ ಮಹಿಳೆಯೊಬ್ಬರಿಗೆ ಪಾಪದ ಪರಿಹಾರಕ್ಕಾಗಿ ಗಂಗಾ ಸ್ನಾನ ಮಾಡಲು ಒಂದು ವಾರ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಮಧ್ಯಪ್ರದೇಶದ ಜಾತಿ ಪಂಚಾಯತ್ ಆದೇಶ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ...

ಭಿಂಡ್: ಕರುವೊಂದರ ಆಕಸ್ಮಿಕ ಸಾವಿಗೆ ಕಾರಣವಾದ ಮಹಿಳೆಯೊಬ್ಬರಿಗೆ ಪಾಪದ ಪರಿಹಾರಕ್ಕಾಗಿ ಗಂಗಾ ಸ್ನಾನ ಮಾಡಲು ಒಂದು ವಾರ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಮಧ್ಯಪ್ರದೇಶದ ಜಾತಿ ಪಂಚಾಯತ್ ಆದೇಶ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 
ಕಮಲೇಶಿ ದೇವಿ (60) ಪಂಚಾಯತ್ ಸದಸ್ಯರು ನೀಡಿದ್ದ ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದಾರೆ. ಮಧ್ಯಪ್ರದೇಶದ ಭಿಂಡ್ ಪಟ್ಟಣದಲ್ಲಿ ಘಟನೆ ನಡೆದಿದೆ. 
ಕರು ತನ್ನ ತಾಯಿ ಬಳಿ ಹಾಲು ಕುಡಿಯುತ್ತಿತ್ತು. ಈ ವೇಳೆ ದೇವಿ, ಕರುವನ್ನು ತಾಯಿಯಿಂದ ಪ್ರತ್ಯೇಕಗೊಳಿಸುವ ವೇಳೆ ಹಗ್ಗವನ್ನು ಬಿಗಿಯಾಗಿ ಎಳೆದಿದ್ದಾರೆ. ಪರಿಣಾಮ ಉಸಿರುಗಟ್ಟಿ ಕರು ಸಾವಿಗೀಡಾಗಿತ್ತು. 
ಪ್ರಕರಣ ಸಂಬಂಧ ಪಂಚಾಯತ್ ಸಭೆಯನ್ನು ಸೇರಿಸಲಾಗಿತ್ತು. ಈ ವೇಳೆ ಚರ್ಚೆ ನಡೆಸಿರುವ ಪಂಚಾಯತ್ ಸದಸ್ಯರು ಕಮಲೇಶಿ ದೇವಿಯವರಿಗೆ ಕೂಡಲೇ ಪಟ್ಟಣವನ್ನು ತೊರೆಯುವಂತೆ ಸೂಚಿಸಿದೆ. ಆಲ್ಲದೆ, ಪಾಪ ಪರಿಹಾರಕ್ಕಾಗಿ ನೆರೆಯ ಗ್ರಾಮಗಳಲ್ಲಿ 7 ದಿನಗಳ ಕಾಲ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ, ಬಳಿಕ ಗಂಗಾ ನದಿಯಲ್ಲಿ ಸ್ಮಾನ ಮಾಡುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾರ್ಪೊರೇಟರ್ ಮುಖೇಶ್ ಗಾರ್ಗ್ ಅವರು, ಮಹಿಳೆ ವಿಧವೆಯಾಗಿದ್ದು ಪಂಚಾಯತ್ ಸದಸ್ಯರು ನೀಡಿರುವ ಶಿಕ್ಷೆ ಅಕ್ರಮ ಹಾಗೂ ಅಮಾನವೀಯವಾದದ್ದಾಗಿದೆ. ಈಗಿನ ಯುಗದಲ್ಲೂ ಈ ರೀತಿಯ ಶಿಕ್ಷೆ ನ್ಯಾಯಸಮ್ಮತವಲ್ಲ. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಪಂಚಾಯತ್ ಸದಸ್ಯರು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 
ಮಹಿಳೆಯ ಪುತ್ರ ಅನಿಲ್ ಶ್ರೀವಾಸ್ ಮಾತನಾಡಿ, ಕರುವನ್ನು ಹತ್ಯೆ ಮಾಡುವ ಮೂಲಕ ನನ್ನ ತಾಯಿ ತಪ್ಪು ಮಾಡಿದ್ದರು. ಜಾತಿ ಪಂಚಾಯತ್ತ ಸದಸ್ಯರು ಧರ್ಮ ಹಾಗೂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆಂದು ತಿಳಿಸಿದ್ದಾರೆ. 
ಪೊಲೀಸ್ ಅಧೀಕ್ಷಕ ಅನಿಲ್ ಸಿಂಗ್ ಕುಶ್ವಾಹ ಮಾತನಾಡಿ, ಪ್ರಕರಣ ಸಂಬಂಧ ಈ ವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ. ಮಾಧ್ಯಮಗಳ ಮುಖಾಂತರ ಮಾಹಿತಿ ತಿಳಿಯಿತು. ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT