ನವದೆಹಲಿ: ಗೌರಿ ಲಂಕೇಶ್ ಅವರ ಹತ್ಯೆ ಮೂಲಕ ಸತ್ಯವನ್ನು ಮೌನವಾಗಿಸಲು ಸಾಧ್ಯವಿಲ್ಲ. ಖಂಡಿತ ಅವರ ಸಾವಿಗೆ ಕಾರಣರಾದ ದುಷ್ಕರ್ಮಿಗಳನ್ನು ಕಾನೂನಾತ್ಮಕವಾಗಿ ಶಿಕ್ಷಿಸಲಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಹತ್ಯೆ ಮೂಲಕ ಸತ್ಯವನ್ನು ಮೌನವಾಗಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ನಮ್ಮ ಮನದಲ್ಲಿದ್ದು, ದೇವರು ಅವರ ಕುಟುಂಬಸ್ಥರಿಗೆ ಗೌರಿ ಲಂಕೇಶ್ ಅವರ ಸಾವಿನ ನೋವನ್ನು ತಡೆದುಕೊಳ್ಳು ಶಕ್ತಿ ನೀಡಲಿ. ತಪ್ಪಿತಸ್ಥಿರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮತ್ತೋರ್ವ ಮುಖಂಡ ಕಪಿಲ್ ಸಿಬಲ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಚಾರವಾದಿ ಗೌರಿ ಲಂಕೇಶ್ ರನ್ನು ಗುಂಡೇಟಿನ ಮೂಲಕ ಮೌನವಾಗಿಸಲಾಗಿದೆ. ಅವರ ಹತ್ಯೆ ಮೂಲಕ ವಿರುದ್ಧದ ಮನೋಭಾವಗಳನ್ನು ತಣ್ಣಗಾಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.