ಬೆನಜಿರ್ ಅರ್ಫಾನ್ 
ದೇಶ

ರೋಹಿಂಗ್ಯ ಹಿಂಸಾಚಾರದಲ್ಲಿ ಮಡಿದವರಿಗಾಗಿ ಪ್ರಾರ್ಥನ ಸಭೆ: ಬಿಜೆಪಿ ಮುಸ್ಲಿಂ ಮಹಿಳಾ ನಾಯಕಿ ಅಮಾನತು

ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರಿಗಾಗಿ ಪ್ರಾರ್ಥನ ಸಭೆ ಆಯೋಜಿಸಿದ್ದ ಆರೋಪದ ಮೇಲೆ ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯನ್ನು ಪಕ್ಷ ಅಮಾನತು ಮಾಡಿದೆ...

ಗುವಾಹಟಿ: ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರಿಗಾಗಿ ಪ್ರಾರ್ಥನ ಸಭೆ ಆಯೋಜಿಸಿದ್ದ ಆರೋಪದ ಮೇಲೆ ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯನ್ನು ಪಕ್ಷ ಅಮಾನತು ಮಾಡಿದೆ. 
ಭಾರತೀಯ ಜನತಾ ಮಜ್ದೂರ್ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸದಸ್ಯೆ ಬೆನಜಿರ್ ಅರ್ಫಾನ್ ಅವರು ಮತ್ತೊಂದು ಸಂಸ್ಥೆ ಆಯೋಜಿಸಿದ್ದ ಪ್ರದರ್ಶನಕ್ಕೆ ಜನರನ್ನು ಆಕರ್ಷಿಸಲು ಬಿಜೆಪಿ ಸಾಮಾಜಿಕ ಮಾಧ್ಯಮ ವೇದಿಕೆ ಬಳಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಶೋಕಾಸ್ ನೋಟೀಸ್ ನೀಡಿದೆ. 
ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರ ಮೇಲೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರಿಗಾಗಿಎನ್ಜಿಒ ಯುನೈಟೆಡ್ ಮೈನಾರಿಟಿ ಪೀಪಲ್ಸ್ ಫೋರಂ  ಪ್ರಾರ್ಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 
ನಾನು ತ್ರಿವಳಿ ತಾಲಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದಲ್ಲಿ ನಿಂತಿದ್ದೆ. ಇದೀಗ ಪಕ್ಷ ವಿವರಿಸಲು ಅವಕಾಶ ನೀಡದೆ ನನಗೆ ತಲಾಕ್ ನೀಡಿದೆ ಎಂದು ಅರ್ಫಾನ್ ಹೇಳಿದ್ದಾರೆ. 
ರೋಹಿಂಗ್ಯ ಮುಸ್ಲಿಂರ ಸಮಸ್ಯೆ ಕುರಿತಂತೆ ಯಾವುದೇ ಮಾಹಿತಿ ನೀಡದೇ ಪಕ್ಷದ ಪೂರ್ವಾನುಮತಿ ಪಡೆಯದೇ ಪಕ್ಷದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿದ್ದರಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯ ಬೆನಜಿರ್ ರ ಅಮಾನತು ಆದೇಶಕ್ಕೆ ಸಹಿ ಹಾಕಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT