ದೇಶ

ರಾಯಲಸೀಮಾ: ಬರ ಪೀಡಿತ ರೈತರಿಂದ ಪ್ರಧಾನಿ ಮೋದಿಗೆ 68 ಪೈಸೆಯ 400 ಚೆಕ್!

Vishwanath S
ಹೈದರಾಬಾದ್: ಬರ ಪೀಡಿತ ರಾಯಲಸೀಮ ಪ್ರಾಂತ್ಯದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ 68 ಪೈಸೆಗಳ 400 ಚೆಕ್ ಗಳನ್ನು ಕಳುಹಿಸಿದ್ದಾರೆ.
ರಾಯಲಸೀಮೆ ಪ್ರಾಂತ್ಯದ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ರಾಯಲಸೀಮಾ ಸಗುಣೀತಿ ಸಾಧನಾ ಸಮಿತಿ(ಆರ್ಎಸ್ಎಸ್ಎಸ್) ಎಂಬ ಸರ್ಕಾರೇತರ ಸೇವಾ ಸಂಘಟನೆಯು ರೈತರ ಪರವಾಗಿ ಪ್ರಧಾನಿ ಮೋದಿ ಅವರಿಗೆ ತಲಾ 68 ಪೈಸೆಗಳ 400 ಚೆಕ್ ಗಳನ್ನು ಕಳುಹಿಸಿಕೊಟ್ಟಿದ್ದು ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮಿಂದ ಕೊಡಲು ಸಾಧ್ಯವಿರುವ ಗರಿಷ್ಠ ಉಡುಗೊರೆಯಾಗಿದೆ ಎಂದು ರೈತರು ಹೇಳಿದ್ದಾರೆ. 
ರಾಯಲಸೀಮೆ ಪ್ರಾಂತ್ಯದ ನಾಲ್ಕು ಜಿಲ್ಲೆಗಳಾದ ಕಡಪ, ಅನಂತಪುರ, ಕರ್ನೂಲ್ ಮತ್ತು ಚಿತ್ತೂರು ಬರ ತಾಂಡವವಾಡುತ್ತಿದೆ. ಇಲ್ಲಿನ ರೈತಾಪಿ ಜನರ ದಯನೀಯ ಪರಿಸ್ಥಿತಿಯನ್ನು ಪ್ರಧಾನಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡುವುದಕ್ಕೆ ಈ ರೀತಿ ಮಾಡಿರುವುದಾಗಿ ಸಂಘಟನೆ ಹೇಳಿದೆ. 
SCROLL FOR NEXT