ದೇಶ

ಖಾನ್ಪುರ ಶಾಲೆ: ಅಮಲಿನಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪಾನಮತ್ತ ಪ್ರಾಂಶುಪಾಲ

Srinivas Rao BV
ಖಾನ್ಪುರ: ಗುರುಗ್ರಾಮದ ಶಾಲೆಯಲ್ಲಿ ವರ್ಷದ ಬಾಲಕ ಹತ್ಯೆಯಾಗಿ ವಿದ್ಯಾರ್ಥಿಗಳ ಭದ್ರತೆ ಬಗ್ಗೆ ಆತಂಕ ಮೂಡಿರುವ ಬೆನ್ನಲ್ಲೇ ಖಾನ್ಪುರದಲ್ಲಿ ವಿದ್ಯಾರ್ಥಿಗಳಿಗೆ ಕುಡಿದ ಅಮಲಿನಲ್ಲಿ ಪಾಠ ಮಾಡುವ ಪ್ರಾಂಶುಪಾಲ ಇರುವುದು ಮತ್ತೊಂದು ರೀತಿಯ ಆತಂಕ ಮೂಡಿಸಿದೆ. 
ಖಾನ್ಪುರದ ನೇವಾಡ ಗ್ರಾಮದ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಪಾನಮತ್ತನಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಕಂಡುಬಂದಿದೆ. ಪಾನಮತ್ತ ಪ್ರಾಂಶುಪಾಲರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲೆಯ ವಿದ್ಯಾರ್ಥಿಗಳ ಭದ್ರತೆ ಬಗ್ಗೆ ಆತಂಕ ಮೂಡಿದೆ. 
SCROLL FOR NEXT