ಅಮೃತಸರ: ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ ದಾಳಿಕೋರರನ್ನು ಗಡಿ ಭದ್ರತಾ ಪಡೆ ಪಂಜಾಬ್ ನಲ್ಲಿ ಇಂದು ಹತ್ಯೆಗೈದಿದೆ.
ಇಬ್ಬರು ದಾಳಿಕೋರರ ಶವಗಳನ್ನು ಹೊರತೆಗೆಯಲಾಗಿದ್ದು ಅವರ ಬಳಿಯಿದ್ದ ಎಕೆ-47 ರೈಫಲ್, ಪಿಸ್ತೂಲ್ ಮತ್ತು 12ಕ್ಕೂ ಅಧಿಕ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಅಮೃತಸರದ ಅಜ್ನಲಾ ವಲಯದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಗಡಿ ಭದ್ರತಾ ಪಡೆಗೆ ಪ್ರತಿದಾಳಿ ನಡೆಸಿದ ಒಳನುಸುಳುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಡೆದರು. ಇದಕ್ಕೆ ಗಡಿ ಭದ್ರತಾ ಪಡೆ ಪೊಲೀಸರು ತಕ್ಕ ಪ್ರತಿದಾಳಿ ನಡೆಸಿ ಇಬ್ಬರನ್ನೂ ಕೊಂದು ಹಾಕುವಲ್ಲಿ ಯಶಸ್ವಿಯಾದರು ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಇಬ್ಬರು ಕೂಡ ಪಾಕಿಸ್ತಾನದ ಸಿಮ್ ಕಾರ್ಡ್, 4 ಕೆಜಿ ಹೆರಾಯಿನ್ ಮತ್ತು 20,000 ರೂಪಾಯಿ ಬೆಲೆಬಾಳುವ ಪಾಕಿಸ್ತಾನದ ಕರೆನ್ಸಿಗಳನ್ನು ಹೊಂದಿದ್ದರು.ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಆ ಪ್ರದೇಶವನ್ನು ಗಡಿ ಭದ್ರತಾ ಪಡೆ ಸುತ್ತುವರಿದಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos