ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್: ಭಾರತ-ಪಾಕ್ ಗಡಿಯಲ್ಲಿ ಇಬ್ಬರು ಒಳನುಸುಳುಕೋರರ ಹತ್ಯೆ

ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ...

ಅಮೃತಸರ: ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ ದಾಳಿಕೋರರನ್ನು ಗಡಿ ಭದ್ರತಾ ಪಡೆ ಪಂಜಾಬ್ ನಲ್ಲಿ ಇಂದು ಹತ್ಯೆಗೈದಿದೆ.
ಇಬ್ಬರು ದಾಳಿಕೋರರ ಶವಗಳನ್ನು ಹೊರತೆಗೆಯಲಾಗಿದ್ದು ಅವರ ಬಳಿಯಿದ್ದ ಎಕೆ-47 ರೈಫಲ್, ಪಿಸ್ತೂಲ್ ಮತ್ತು 12ಕ್ಕೂ ಅಧಿಕ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಅಮೃತಸರದ ಅಜ್ನಲಾ ವಲಯದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಗಡಿ ಭದ್ರತಾ ಪಡೆಗೆ ಪ್ರತಿದಾಳಿ ನಡೆಸಿದ ಒಳನುಸುಳುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಡೆದರು. ಇದಕ್ಕೆ ಗಡಿ ಭದ್ರತಾ ಪಡೆ ಪೊಲೀಸರು ತಕ್ಕ ಪ್ರತಿದಾಳಿ ನಡೆಸಿ ಇಬ್ಬರನ್ನೂ ಕೊಂದು ಹಾಕುವಲ್ಲಿ ಯಶಸ್ವಿಯಾದರು ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಇಬ್ಬರು ಕೂಡ ಪಾಕಿಸ್ತಾನದ ಸಿಮ್ ಕಾರ್ಡ್, 4 ಕೆಜಿ ಹೆರಾಯಿನ್ ಮತ್ತು 20,000 ರೂಪಾಯಿ ಬೆಲೆಬಾಳುವ ಪಾಕಿಸ್ತಾನದ ಕರೆನ್ಸಿಗಳನ್ನು ಹೊಂದಿದ್ದರು.ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಆ ಪ್ರದೇಶವನ್ನು ಗಡಿ ಭದ್ರತಾ ಪಡೆ ಸುತ್ತುವರಿದಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT