ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್: ಭಾರತ-ಪಾಕ್ ಗಡಿಯಲ್ಲಿ ಇಬ್ಬರು ಒಳನುಸುಳುಕೋರರ ಹತ್ಯೆ

ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ...

ಅಮೃತಸರ: ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ ದಾಳಿಕೋರರನ್ನು ಗಡಿ ಭದ್ರತಾ ಪಡೆ ಪಂಜಾಬ್ ನಲ್ಲಿ ಇಂದು ಹತ್ಯೆಗೈದಿದೆ.
ಇಬ್ಬರು ದಾಳಿಕೋರರ ಶವಗಳನ್ನು ಹೊರತೆಗೆಯಲಾಗಿದ್ದು ಅವರ ಬಳಿಯಿದ್ದ ಎಕೆ-47 ರೈಫಲ್, ಪಿಸ್ತೂಲ್ ಮತ್ತು 12ಕ್ಕೂ ಅಧಿಕ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಅಮೃತಸರದ ಅಜ್ನಲಾ ವಲಯದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಗಡಿ ಭದ್ರತಾ ಪಡೆಗೆ ಪ್ರತಿದಾಳಿ ನಡೆಸಿದ ಒಳನುಸುಳುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಡೆದರು. ಇದಕ್ಕೆ ಗಡಿ ಭದ್ರತಾ ಪಡೆ ಪೊಲೀಸರು ತಕ್ಕ ಪ್ರತಿದಾಳಿ ನಡೆಸಿ ಇಬ್ಬರನ್ನೂ ಕೊಂದು ಹಾಕುವಲ್ಲಿ ಯಶಸ್ವಿಯಾದರು ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಇಬ್ಬರು ಕೂಡ ಪಾಕಿಸ್ತಾನದ ಸಿಮ್ ಕಾರ್ಡ್, 4 ಕೆಜಿ ಹೆರಾಯಿನ್ ಮತ್ತು 20,000 ರೂಪಾಯಿ ಬೆಲೆಬಾಳುವ ಪಾಕಿಸ್ತಾನದ ಕರೆನ್ಸಿಗಳನ್ನು ಹೊಂದಿದ್ದರು.ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಆ ಪ್ರದೇಶವನ್ನು ಗಡಿ ಭದ್ರತಾ ಪಡೆ ಸುತ್ತುವರಿದಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT