ಬಿಎಸ್ಎಫ್, ಪಾಕ್ ರೇಂಜರ್ ಗಳ ಸಭೆ: ಭಾರತದಿಂದ ಪಾಕಿಸ್ತನಕ್ಕೆ ನಿರ್ದಯ ಕ್ರಮದ ಎಚ್ಚರಿಕೆ 
ದೇಶ

ಬಿಎಸ್ಎಫ್, ಪಾಕ್ ರೇಂಜರ್ ಗಳ ಸಭೆ: ಭಾರತದಿಂದ ಪಾಕಿಸ್ತನಕ್ಕೆ ನಿರ್ದಯ ಕ್ರಮದ ಎಚ್ಚರಿಕೆ

ಯೋಧರ ಹತ್ಯೆಯನ್ನು ಭಾರತ ಖಂಡಿಸಿದ್ದು, ಪಾಕಿಸ್ತಾನದ ಉದ್ಧಟತನ ಮುಂದುವರೆದರೆ ನಿರ್ದಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಶ್ರೀನಗರ: ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿ 6 ತಿಂಗಳ ನಂತರ ಮೊದಲ ಬಾರಿಗೆ ಗಡಿ ಭದ್ರತಾ ಸಿಬ್ಬಂದಿ ಹಾಗೂ ಪಾಕಿಸ್ತಾನ ರೇಂಜರ್ ಗಳ ಸಭೆ ನಡೆದಿದ್ದು, ಯೋಧರ ಹತ್ಯೆಯನ್ನು ಭಾರತ ಖಂಡಿಸಿದ್ದು, ಪಾಕಿಸ್ತಾನದ ಉದ್ಧಟತನ ಮುಂದುವರೆದರೆ ನಿರ್ದಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. 
ಪಾಕಿಸ್ತಾನದ ರೇಂಜರ್ ಗಳ ಮನವಿಯ ಮೇರೆಗೆ ಗಡಿಯಲ್ಲಿ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆದಿದ್ದು, ತನ್ನ ಯೋಧರ ಹತ್ಯೆ ನಡೆಸುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ಉದ್ಧಟತನ, ಕದನ ವಿರಾಮ ಉಲ್ಲಂಘನೆ ಮುಂದುವರೆದರೆ ಭಾರಿ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಪಾಕ್ ರೇಂಜರ್ ಗಳಿಗೆ ಭಾರತದ ಕಮಾಂಡರ್ ಗಳು ಎಚ್ಚರಿಸಿದ್ದಾರೆ.
ಜಮ್ಮು ಸೆಕ್ಟರ್ ನ ಡಿಐಜಿ ಪಿಎಸ್ ಧೀಮನ್ ನೇತೃತ್ವದಲ್ಲಿ 17 ಅಧಿಕಾರಿಗಳು ಧ್ವಜ ಸಭೆಯಲ್ಲಿ ಭಾಗವಹಿಸಿ, ಸುಮಾರು ಒಂದು ವರೆ ಗಂಟೆಯ ವರೆಗೆ ಪಾಕ್ ರೇಂಜರ್ ಗಳೊಂದಿಗೆ ಸಭೆ ನಡೆದಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT