ಕುಟುಂಬ ಸದಸ್ಯನನ್ನು ಕಳೆದುಕೊಂಡು ದುಃಖದಲ್ಲಿ ಸಂಬಂಧಿಕರು 
ದೇಶ

ಮುಂಬೈ ಕಾಲ್ತುಳಿತ ದುರಂತ; ಶವಗಳಿಗೆ ನಂಬರ್ ಹಾಕಿದ್ದ ವೈದ್ಯರ ವಿರುದ್ಧ ಆಕ್ರೋಶ

ವಾಣಿಜ್ಯ ನಗರ ಮುಂಬೈನ ಎಲ್ಫಿನ್'ಸ್ಟೋನ್ ರೈಲು ನಿಲ್ಧಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಬಲಿಯಾದವರ ಶವಗಳನ್ನಿರಿಸಿದ್ದ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯರು, ಶವಗಳನ್ನು ಗುರ್ತಿಸುವ ಸಲುವಾಗಿ ಹಣೆಗಳ ಮೇಲೆ ನಂಬರ್ ಹಾಕಿದ್ದಕ್ಕೆ ತೀವ್ರ...

ಮುಂಬೈ: ವಾಣಿಜ್ಯ ನಗರ ಮುಂಬೈನ ಎಲ್ಫಿನ್'ಸ್ಟೋನ್ ರೈಲು ನಿಲ್ಧಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಬಲಿಯಾದವರ ಶವಗಳನ್ನಿರಿಸಿದ್ದ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯರು, ಶವಗಳನ್ನು ಗುರ್ತಿಸುವ ಸಲುವಾಗಿ ಹಣೆಗಳ ಮೇಲೆ ನಂಬರ್ ಹಾಕಿದ್ದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 
ಶವಗಳ ಹಣೆ ಮೇಲೆ ನಂಬರ್ ಹಾಕಿದ ವೈದ್ಯರ ನಡೆಗೆ ಖಂಡಿಸಿ ವೈದ್ಯರೊಬ್ಬರಿಗೆ ಶಿವಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ದಾಳಿ ಕುರಿತೆತ ಪ್ರತಿಕ್ರಿಯೆ ನೀಡಿರುವ ವೈದ್ಯ ಹರಿ ಪಥಕ್ ಎಂಬುವವರು, ಕಳೆದ ರಾತ್ರಿ ಕಚೇರಿಗೆ 5-6 ಮಂದಿಯಿದ್ದ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ದಾಳಿ ನಡೆಸಿದವರು ಶಿವಸೇನೆಯ ಸದಸ್ಯರಾಗಿದ್ದಾರೆ. ಕಚೇರಿಯೊಳಗೆ ನುಗ್ಗಿದ ಗುಂಪು ನನ್ನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಒಬ್ಬ ವ್ಯಕ್ತಿಯ ಬಳಿ ಶಿವಸೇನೆಯ ಸದಸ್ಯತ್ವದ ಗುರುತಿನ ಚೀಟಿ ಇತ್ತು ಎಂದು ಹೇಳಿದ್ದಾರೆ. 
ಶವಗಳ ಹಣೆಗಳ ಮೇಲೆ ನಂಬರ್ ಗಳನ್ನು ಹಾಕಿರುವುದಕ್ಕೆ ಇದೀಗ ಸಂತ್ರಸ್ತರ ಕುಟುಂಬಸ್ಥರೂ ಕೂಡ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ಇದೊಂದು ವೈಜ್ಞಾನಿಕ ಕ್ರಮವಾಗಿದೆ. ಮೃತದೇಹಗಳ ಕುರಿತಂತೆ ಉಂಟಾಗುವ ಗೊಂದಲಗಳನ್ನು ನಿವಾರಣೆ ಮಾಡಲು ಹಾಗೂ ಶವಗಳನ್ನು ಗುರ್ತಿಸಲು ಈ ರೀತಿ ಮಾಡಲಾಗಿದೆ. ನಮ್ಮ ನಿರ್ಧಾರ ಜನರ ಮನಸ್ಸಿಗೆ ನೋವುಂಟು ಮಾಡಬೇಕೆಂಬುದಾಗಿಲ್ಲ ಎಂದು ಹೇಳಿಕೊಂಡಿದೆ. 
ದಾಳಿ ನಡೆಸಿದ್ದ ಐವರಲ್ಲಿ ಇಬ್ಬರನ್ನು ಇದೀಗ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT