ದೇಶ

ಒಡಿಶಾ: ಶಸ್ತ್ರ ಸರ್ಜಿತ ದರೋಡೆಕೋರರಿಂದ ಆಂಧ್ರ ಬ್ಯಾಂಕ್‌ನಲ್ಲಿ 23 ಲಕ್ಷ, ಚಿನ್ನಾಭರಣ ದರೋಡೆ

Vishwanath S
ಅಂಗುಲ್(ಭುವನೇಶ್ವರ್): ಒಡಿಶಾದ ಅಂಗುಲ್ ನಗರದಲ್ಲಿನ ಆಂಧ್ರ ಬ್ಯಾಂಕ್ ಗೆ ನುಗ್ಗಿದ ಶಸ್ತ್ರ ಸರ್ಜಿತ ದರೋಡೆಕೋರರು ಗನ್ ತೋರಿಸಿ 23 ಲಕ್ಷ ರು. ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. 
ಹಾಡುಹಗಲೇ ದರೋಡೆಕೋರರ ಗುಂಪೊಂದು ಪಂಚಾಯತ್ ಚೌಕ್ ನಲ್ಲಿನ ಬ್ರಾಂಚ್ ಗೆ ನುಗ್ಗಿ ದರೋಡೆ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರು ಮಂದಿ ದರೋಡೆಕೋರರು ಮೂರು ಬೈಕ್ ಗಳಲ್ಲಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು ಮೊದಲಿಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಬಳಿಯಿದ್ದ ಮೊಬೈಲ್ ಗಳನ್ನು ಕಿತ್ತುಕೊಂಡಿದ್ದಾರೆ. ದರೋಡೆಕೋರರ ಬಳಿ ಪಿಸ್ತೂಲ್ ಗಳು ಇದ್ದಿದ್ದರಿಂದ ಯಾರು ಅವರನ್ನು ತಡೆಯಲು ಮುಂದಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT