ಜನರಲ್ ರಾವತ್ 
ದೇಶ

ಬಂದೂಕು ಒಂದೇ ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು

ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಜಮ್ಮು -ಕಾಶ್ಮೀರ  :  ಸೇನೆ ಇರಬಹುದು ಅಥವಾ ಉಗ್ರ ಚಟುವಟಿಕೆ ಇರಬಹುದು ಎಲ್ಲಾದಕ್ಕೂ ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸಲು ಶಾಂತಿಯೊಂದೇ ಮಾರ್ಗ . ಮೂರು ದಶಕಗಳಿಂದಲೂ ಇಲ್ಲಿಯವರೆಗೂ ದಂಗೆಗೆ ಕಾಶ್ಮೀರ ಸಾಕ್ಷಿಯಾಗುತ್ತಲೇ ಇದೆ. ಆದರೆ , ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದ್ದು, ಆದರೆ  ಕೆಲ ಯುವಕರು  ತೀವ್ರಗಾಮಿ ರೀತಿಯ ಚಟುವಟಿಕೆಯಲ್ಲಿ ನಿರತರಾಗಿದ್ದು, ಬಂದೂಕು ಮೂಲಕ ಗುರಿಸಾಧಿಸಲು ಹೊರಟಿದ್ದಾರೆ  ಎಂದಿದ್ದಾರೆ.

ಶಾಂತಿಗಾಗಿ ಎಲ್ಲರೂ ಒಗ್ಗೂಡಿ ಪರಿಹಾರ ಮಾರ್ಗ ಕಂಡುಹಿಡಿದು  ಅದರಲ್ಲಿ ಯಶಸ್ವಿಯಾಗೋಣ ಎಂದು ರಾವತ್ ಹೇಳಿದ್ದಾರೆ.

ಲಘು  ಕಾಲಾಳುಪಡೆಯ 70 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಮಾಜಿ ಸೇನಾ ಮುಖ್ಯಸ್ಥರು,  ಕಣಿವೆ ಭಾಗದಲ್ಲಿನ ಜನರು ಭಯದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಕೆಲವರಷ್ಟೇ ಶಾಂತಿಯಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

 ಇಂತಹ ಚಟುವಟಿಕೆಗಳಿಂದ ದೂರ ಇದ್ದು, ವಿಶ್ವವಿದ್ಯಾಲಯಗಳತ್ತ ಗಮನ ಹರಿಸುವಂತೆ ಕಾಶ್ಮೀರ ಯುವಕರಿಗೆ ತಿಳಿಸಿದ ರಾವತ್,  ಒಗ್ಗೂಡಿ ಕಾರ್ಯನಿರ್ವಹಿಸುವುದರಿಂದ ಶಾಂತಿಯನ್ನು ಸ್ಥಾಪಿಸಬಹುದು ಎಂದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT