ದೇಶ

ಬಂದೂಕು ಒಂದೇ ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು

Nagaraja AB

ಜಮ್ಮು -ಕಾಶ್ಮೀರ  :  ಸೇನೆ ಇರಬಹುದು ಅಥವಾ ಉಗ್ರ ಚಟುವಟಿಕೆ ಇರಬಹುದು ಎಲ್ಲಾದಕ್ಕೂ ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸಲು ಶಾಂತಿಯೊಂದೇ ಮಾರ್ಗ . ಮೂರು ದಶಕಗಳಿಂದಲೂ ಇಲ್ಲಿಯವರೆಗೂ ದಂಗೆಗೆ ಕಾಶ್ಮೀರ ಸಾಕ್ಷಿಯಾಗುತ್ತಲೇ ಇದೆ. ಆದರೆ , ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದ್ದು, ಆದರೆ  ಕೆಲ ಯುವಕರು  ತೀವ್ರಗಾಮಿ ರೀತಿಯ ಚಟುವಟಿಕೆಯಲ್ಲಿ ನಿರತರಾಗಿದ್ದು, ಬಂದೂಕು ಮೂಲಕ ಗುರಿಸಾಧಿಸಲು ಹೊರಟಿದ್ದಾರೆ  ಎಂದಿದ್ದಾರೆ.

ಶಾಂತಿಗಾಗಿ ಎಲ್ಲರೂ ಒಗ್ಗೂಡಿ ಪರಿಹಾರ ಮಾರ್ಗ ಕಂಡುಹಿಡಿದು  ಅದರಲ್ಲಿ ಯಶಸ್ವಿಯಾಗೋಣ ಎಂದು ರಾವತ್ ಹೇಳಿದ್ದಾರೆ.

ಲಘು  ಕಾಲಾಳುಪಡೆಯ 70 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಮಾಜಿ ಸೇನಾ ಮುಖ್ಯಸ್ಥರು,  ಕಣಿವೆ ಭಾಗದಲ್ಲಿನ ಜನರು ಭಯದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಕೆಲವರಷ್ಟೇ ಶಾಂತಿಯಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

 ಇಂತಹ ಚಟುವಟಿಕೆಗಳಿಂದ ದೂರ ಇದ್ದು, ವಿಶ್ವವಿದ್ಯಾಲಯಗಳತ್ತ ಗಮನ ಹರಿಸುವಂತೆ ಕಾಶ್ಮೀರ ಯುವಕರಿಗೆ ತಿಳಿಸಿದ ರಾವತ್,  ಒಗ್ಗೂಡಿ ಕಾರ್ಯನಿರ್ವಹಿಸುವುದರಿಂದ ಶಾಂತಿಯನ್ನು ಸ್ಥಾಪಿಸಬಹುದು ಎಂದರು.


SCROLL FOR NEXT