ಸಿಂಧೂ ನಾಗರಿಕತೆ 
ದೇಶ

ಜಗತ್ತಿನ ಅತೀ ಪ್ರಾಚೀನ ಸಿಂಧು ನಾಗರಿಕತೆ ನಾಶವಾಗಲು ಏನು ಕಾರಣ ಗೊತ್ತಾ?

ಜಗತ್ತಿನ ಅತೀ ಪ್ರಾಚೀನ ಸಿಂಧು ನಾಗರಿಕತೆ ನಾಶವಾಗಲು ಕಾರಣವೆಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ...

ಖರಗ್‌ಪುರ: ಜಗತ್ತಿನ ಅತೀ ಪ್ರಾಚೀನ ಸಿಂಧು ನಾಗರಿಕತೆ ನಾಶವಾಗಲು ಕಾರಣವೆಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. 
4,500 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಒಂಭೈನ್ನೂರು ವರ್ಷಗಳ ಸತತ ಬರಗಾಲದಿಂದಾಗಿ ನಶಿಸಿ ಹೋಯಿತು ಎಂಬುದನ್ನು ಖರಗ್‌ಪುರ ಐಐಟಿ ವಿಜ್ಞಾನಿಗಳ ತಂಡದ ಸಂಶೋಧನೆಯ ಅಧ್ಯಾಯನದಿಂದಾಗಿ ತಿಳಿದುಬಂದಿದೆ. 
ಐಐಟಿಯ ಭೂವಿಜ್ಞಾನ ಮತ್ತು ಭೂಭೌತ ವಿಜ್ಞಾನಗಳ ವಿಭಾಗದ ಸಂಶೋಧಕರು ಕಳೆದ 5 ಸಾವಿರ ವರ್ಷಗಳ ಮಾನ್ಸೂನ್ ಏರಿಳಿತಗಳ ಅಧ್ಯಯನ ನಡೆಸಿದೆ. ವಾಯುವ್ಯ ಹಿಮಾಲಯದ ಪ್ರದೇಶಗಳಲ್ಲಿ ಸತತ 900 ವರ್ಷಗಳ ಕಾಲ ಭೀಕರ ಬರಗಾಲ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. 
ತೀವ್ರ ಬರಗಾಲದಿಂದ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳೆಲ್ಲ ಬತ್ತಿಹೋದವು. ಕ್ರಮೇಣ ಅಲ್ಲಿ ವಾಸಿಸುತ್ತಿದ್ದ ಜನರೆಲ್ಲ ಮಳೆ ಚೆನ್ನಾಗಿ ಬೀಳುತ್ತಿದ್ದ ಪೂರ್ವ ಮತ್ತು ದಕ್ಷಿಣದ ಕಡೆಗೆ ವಲಸೆ ಹೋದರು. 
ಈ ರೀತಿ ನೆಲೆ ಕಳೆದುಕೊಂಡ ಜನರು ಕ್ರಮೇಣ ಗಂಗಾ-ಯಮುನಾ ಕಣಿವೆಯತ್ತ ಪೂರ್ವ ಮತ್ತು ಮಧ್ಯ ಉತ್ತರ ಪ್ರದೇಶ ಬಿಹಾರ ಮತ್ತು ಬಂಗಾಳ ಹಾಗೂ ದಕ್ಷಿಣದಲ್ಲಿ ವಿಂಧ್ಯಾಚಲ ಮತ್ತು ದಕ್ಷಿಣ ಗುಜರಾತ್ ಕಡೆ ವಲಸೆ ಹೋದರು ಎಂದು ಸಂಶೋಧಕರ ತಂಡದ ಮುಖ್ಯಸ್ಥ ಅನಿಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. 
ಲೇಹ್-ಲಡಾಖ್ ಪ್ರದೇಶದ ಸೊ ಮೊರಿರಿ ಸರೋವರದ ಸುತ್ತಮುತ್ತ 5 ಸಾವಿರ ವರ್ಷಗಳ ಮಳೆ ಪ್ರವೃತ್ತಿಯನ್ನು ಐಐಟಿ ಖರಗ್ಪುರದ ವಿಜ್ಞಾನಿಗಳ ತಂಡದ ಅಧ್ಯಯನ ನಡೆಸಿದ್ದು ಈ ಅಧ್ಯಯನದ ವಿವರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪತ್ರಿಕೆ ಕ್ವಾಟೆರ್ನರಿ ಇಂಟರ್ ನ್ಯಾಷನಲ್ ಜರ್ನಲ್ ನಲ್ಲಿ ಈ ತಿಂಗಳು ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT