ಮುಂಬೈ: 1993ರ ಮುಂಬೈ ಬಾಂಬ್ ಸ್ಫೋಟ ಅಪರಾಧಿ, ಗ್ಯಾಂಗ್ಸ್ಟರ್ ಅಬುಸಲೇಂ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ನವಿ ಮುಂಬಯಿ ಕಮಿಷನರ್ ತಿರಸ್ಕರಿಸಿದ್ದಾರೆ. ಹೀಗಾಗಿ ಅಬುಸಲೇಂ ಮದುವೆಯನ್ನು ತಡೆ ಹಿಡಿಯಲಾಗಿದೆ.
ತಾನು 2ನೇ ಬಾರಿ ಸೈಯ್ಯದ್ ಬಾಹರ್ ಕೌಸರ್ ಎಂಬಾಕೆಯನ್ನು ವಿವಾಹವಾಗಬೇಕಿದ್ದು 45 ದಿನಗಳ ಪೆರೋಲ್ ನೀಡಬೇಕೆಂದು ಮನವಿ ಮಾಡಿದ್ದನು. ಸದ್ಯ ಅಬು ಸಲೇಂ ತಲೋಜಾ ಕಾರಾಗೃಹದಲ್ಲಿದ್ದಾನೆ.
1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. 27 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಅಬು ಸಲೇಂ ದೋಷಿ ಎಂದು ಕಳೆದ ತಿಂಗಳಷ್ಟೆ ಮುಂಬೈ ಟಾಡಾ ಕೋರ್ಟ್ ತೀರ್ಪು ನೀಡಿತ್ತು.