ಅನುದೀಪ್‌ ದುರಿಶೆಟ್ಟಿ 
ದೇಶ

ಯುಪಿಎಸ್ ಸಿ ಫಲಿತಾಂಶ ಪ್ರಕಟ: ಹೈದರಾಬಾದ್ ಯುವಕ ಟಾಪರ್, 25 ಕನ್ನಡಿಗರು ತೇರ್ಗಡೆ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ....

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಹೈದಾರಾಬಾದ್ ಯುವಕ ಅನುದೀಪ್‌ ದುರಿಶೆಟ್ಟಿ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ. ಅನು ಕುಮಾರಿ ಎರಡನೇ ಹಾಗೂ ಸಚಿನ್ ಗುಪ್ತ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಈ ಬಾರಿ ಒಟ್ಟು 990 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ  25 ಅಭ್ಯರ್ಥಿಗಳು ವಿವಿಧ ಹಂತದ ಯಾಂಕ್‌ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.
ಅನುದೀಪ್‌ ದುರಿಶೆಟ್ಟಿ ರಾಜಸ್ಥಾನದ ಪಿಲನಿಯ ಬಿಐಟಿಎಸ್ ನಲ್ಲಿ ಬಿಇ ಪದವಿ ಪಡೆದಿದ್ದು, ಯುಪಿಎಸ್ ಸಿ ಪರೀಕ್ಷೆಯಲ್ಲಿ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳು
ಕೀರ್ತಿ ಕಿರಣ್‌ ಪೂಜಾರ್‌ 115 ರ್ಯಾಂಕ್
ಎಂ.ಶ್ವೇತಾ 119 ರ್ಯಾಂಕ್
ಟಿ.ಶುಭಮಂಗಳಾ 147 ರ್ಯಾಂಕ್
ಸಿ. ವಿಂಧ್ಯಾ 160 ರ್ಯಾಂಕ್
ಕೃತಿಕಾ 194 ರ್ಯಾಂಕ್ 
ಪೃಥ್ವಿಕ್‌ ಶಂಕರ್‌ 211 ರ್ಯಾಂಕ್
ಬಿ.ಗೋಪಾಲಕೃಷ್ಣ 265 ರ್ಯಾಂಕ್
ಎಚ್‌.ವಿನೋದ್‌ ಪಾಟೀಲ್‌ 294 ರ್ಯಾಂಕ್
ಎಂ.ಪುನೀತ್‌ ಕುಟ್ಟಯ್ಯ 324 ರ್ಯಾಂಕ್
ಸಿದ್ದಲಿಂಗ ರೆಡ್ಡಿ 346 ರ್ಯಾಂಕ್
ಸುದರ್ಶನ ಭಟ್‌ 434 ರ್ಯಾಂಕ್
ಎನ್‌.ವೈ. ವೃಶಾಂಕ್‌ 478 ರ್ಯಾಂಕ್
ಅಭಿಲಾಷ್‌ ಶಶಿಕಾಂತ್‌ ಬದ್ದೂರ್‌ 531 ರ್ಯಾಂಕ್
ನಿಖಿಲ್‌ ನಿಪ್ಪಾಣಿಕರ್‌ 563 ರ್ಯಾಂಕ್
ಟಿ.ಎನ್‌. ನಿಥನ್‌ರಾಜ್‌ 575 ರ್ಯಾಂಕ್
ಎಸ್‌. ಪ್ರೀತಮ್‌ 654 ರ್ಯಾಂಕ್
ಬಿ.ಸಿ. ಹರೀಶ 657 ರ್ಯಾಂಕ್
ಆರ್‌.ವಿಜಯೇಂದ್ರ 666 ರ್ಯಾಂಕ್
ಶಿವರಾಜ್‌ ಸಾಯಿಬಣ್ಣ ಮನಗಿರಿ 784 ರ್ಯಾಂಕ್
ಸ್ಪರ್ಶ ನೀಲಾಂಗಿ 805 ರ್ಯಾಂಕ್
ಆರ್‌.ಸಿ. ಹರ್ಷವರ್ಧನ 913 ರ್ಯಾಂಕ್
ವೆಂಕಟೇಶ ನಾಯಕ್‌ 930 ರ್ಯಾಂಕ್
ಪಿ.ಪವನ್‌ 933 ರ್ಯಾಂಕ್
ಮಹೇಶ ವದ್ದೆ 958 ರ್ಯಾಂಕ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT