ದೇಶ

ಆತ್ಮಹತ್ಯೆ ಜಾಗತಿಕ ಸಮಸ್ಯೆ: ರೈತರ ಆತ್ಮಹತ್ಯ ಬಗ್ಗೆ ಮಧ್ಯಪ್ರದೇಶ ಸಚಿವರ ಬೇಜವಾಬ್ದಾರಿ ಹೇಳಿಕೆ

Srinivas Rao BV
ನವದೆಹಲಿ: ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಮಧ್ಯಪ್ರದೇಶ ಸಚಿವ ಆತ್ಮಹತ್ಯೆ ಜಾಗತಿಕ ಸಮಸ್ಯೆ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಆತ್ಮಹತ್ಯೆ ಎಂಬುದು  ಕೇವಲ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ ಸಮಸ್ಯೆಯಾಗಿದೆ ಎಂದು ಮಧ್ಯಪ್ರದೇಶ ಸಚಿವ ಬಾಲಕೃಷ್ಣ ಪಾಟೀದಾರ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಶೇ.21 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ ಮಾ.20 ರಂದು ಹೇಳಿದ್ದರು. ಇದರ ಹೊರತಾಗಿಯೂ ಮಧ್ಯಪ್ರದೇಶ ಸಚಿವ ಆತ್ಮಹತ್ಯೆ ರೈತರಿಗೆ ಮಾತ್ರ ಸೀಮಿತವಾದದ್ದಲ್ಲ, ಜಾಗತಿಕ ಸಮಸ್ಯೆ ಎಂದು ಹೇಳಿದ್ದಾರೆ. 
SCROLL FOR NEXT