ಟೆಡ್ಡಿ ಬೇರ್ 
ದೇಶ

ಮಗಳ ಜೊತೆ ಸಲಿಗೆ ಬೇಡವೆಂದ ಅತ್ತೆಯನ್ನೇ ಟೆಡ್ಡಿ ಬೇರ್‌ನಿಂದ ಕೊಲೆ ಮಾಡಿದ 15ರ ಬಾಲಕ!

ಮಗಳ ಜೊತೆ ಸಲಿಗೆ ಬೇಡ ಎಂದು ಹೇಳಿದ್ದ ಅತ್ತೆಯನ್ನೇ 15 ವರ್ಷದ ಸೋದರಳಿಯ ಟೆಡ್ಡಿ ಬೇರ್‌ನಿಂದ ಉಸಿರು ಗಟ್ಟಿಸಿ, ಚಾಕುವಿನಿಂದ ಎಡಗೈನ ಮಣಿಕಟ್ಟು ಪ್ರದೇಶವನ್ನು ಕತ್ತರಿಸಿ ಕೊಲೆ...

ಚೆನ್ನೈ: ಮಗಳ ಜೊತೆ ಸಲಿಗೆ ಬೇಡ ಎಂದು ಹೇಳಿದ್ದ ಅತ್ತೆಯನ್ನೇ 15 ವರ್ಷದ ಸೋದರಳಿಯ ಟೆಡ್ಡಿ ಬೇರ್‌ನಿಂದ ಉಸಿರು ಗಟ್ಟಿಸಿ, ಚಾಕುವಿನಿಂದ ಎಡಗೈನ ಮಣಿಕಟ್ಟು ಪ್ರದೇಶವನ್ನು ಕತ್ತರಿಸಿ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 
ಮೃತ ಮಹಿಳೆಯನ್ನು 35 ವರ್ಷದ ತಮಿಳ್ ಸೆಲ್ವಿ ಎಂದು ಗುರುತಿಸಲಾಗಿದೆ. ಶಂಕರ್ ಸುಬ್ಬು ಎಂಬುವರ ಜತೆ ತಮಿಳ್ ಸೆಲ್ವಿ ಮದುವೆಯಾಗಿದ್ದರು. ದಂಪತಿ ಚೆನ್ನೈನ ಅಮಿಂಜಿಕರಾಯ್ ವೆಲ್ಲಲಾರ್ ರಸ್ತೆಯಲ್ಲಿ ವಾಸವಾಗಿದ್ದರು. 
ದಂಪತಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಳು. ಇನ್ನು ನಾಲ್ಕು ವರ್ಷದ ಮಗನಿದ್ದ. ರೇಷನ್ ಅಂಗಡಿ ಇಟ್ಟುಕೊಂಡಿದ್ದ ಶಂಕರ್ ಸುಬ್ಬ ಶುಕ್ರವಾರ ಮನೆಗೆ ಬಂದಾಗ ಅಲ್ಲಿ ಪತ್ನಿ ರಕ್ದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ತಮಿಳ್ ಸೆಲ್ವಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. 
ನಂತರ ಶಂಕರ್ ಅಮಿಂಜಿಕರಾಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ತನಿಖೆಗೆ ಶುರು ಮಾಡಿದ ಪೊಲೀಸರು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಮನೆಗೆ ಬಾಲಕನೊರ್ವ ಬಂದು ಹೋಗಿದ್ದು ಗೊತ್ತಾಗಿದೆ. ಶಂಕರ್ ಸುಬ್ಬ ಸಿಸಿಟಿವಿ ದೃಶ್ಯಾವಳಿಯಲ್ಲಿದ್ದ ಬಾಲಕನನ್ನು ಗುರುತಿಸಿ ಆತ ತನ್ನ ಸೋದರಳಿಯ ಎಂದು ಹೇಳಿದ್ದಾರೆ. 
ಕೂಡಲೇ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನನ್ನ ಅತ್ತೆ ಮಗಳ ಜತೆ ಸಲಿಗೆಯಿಂದ ಇರಬೇಡ ಎಂದು ಬೈದಿದ್ದರು. ಇದಕ್ಕೆ ಕೋಪಗೊಂಡು ಅವರನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ