ನಿತೀಶ್ ಕುಮಾರ್ 
ದೇಶ

ಎಲ್ಲಾ ನಿರಾಶ್ರಿತರ ಶಿಬಿರ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿತೀಶ್ ಕಮಾರ್ ಸೂಚನೆ

ಮುಜಫರ್ ಪುರ್ ಜಿಲ್ಲೆಯ ನಿರಾಶ್ರಿತ ಶಿಬಿರದ ಲೈಂಗಿಕ ಹಗರಣದಿಂದ ಎಚ್ಚೆತ್ತುಕೊಂಡ ಬಿಹಾರ ಮುಖ್ಯಮಂತ್ರಿ

ಮುಜಾಫರ್ ಫುರ: ಮುಜಫರ್ ಪುರ್ ಜಿಲ್ಲೆಯ ನಿರಾಶ್ರಿತ ಶಿಬಿರದ ಲೈಂಗಿಕ ಹಗರಣದಿಂದ ಎಚ್ಚೆತ್ತುಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರಾಜ್ಯದ ಎಲ್ಲಾ ಮಕ್ಕಳ ಮತ್ತು ಮಹಿಳಾ ನಿರಾಶ್ರಿತ ಶಿಬಿರಗಳನ್ನು ಪರಿಶೀಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೋಮವಾರ ಸೂಚಿಸಿದ್ದಾರೆ.
ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಗಾಗಿ ಈ ಕೂಡಲೇ ಎಲ್ಲಾ ನಿರಾಶ್ರಿತ ಶಿಬಿರಗಳಿಗೆ ಸೂಕ್ತ ಭದ್ರತೆ ನೀಡುವಂತೆಯೂ ಬಿಹಾರ ಸಿಎಂ ಆದೇಶಿಸಿದ್ದಾರೆ.
ಮುಜಾಫರ್ ಪುರ ಲೈಂಗಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಸಿಬಿಐ ತಂಡ ಈಗಾಗಲೇ ನಿರಾಶ್ರಿತ ಶಿಬಿರ ತಲುಪಿದ್ದು, ತನಿಖೆ ಮುಂದುವರೆಸಿದೆ.
ಮುಜಾಫರ್ ಪುರ ನಿರಾಶ್ರಿತ ಶಿಬಿರದಲ್ಲಿದ್ದ 44 ಬಾಲಕಿಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಉದ್ಯೋಗಿಗಳನ್ನು ಈಗಾಗಲೇ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT