ದೇಶ

ಸಾಮೂಹಿಕ ಹಲ್ಲೆ ದೇಶಾದ್ಯಂತ ಇರುವ ಸಮಸ್ಯೆ: ವಿಕೆ ಸಿಂಗ್

Srinivas Rao BV
ಲಖನೌ: ಸಾಮೂಹಿಕ ಹಲ್ಲೆ ಪ್ರಕರಣಗಳ ಬಗ್ಗೆ ಕೇಂದ್ರ ಸಚಿವ ವಿಕೆ ಸಿಂಗ್ ಮಾತನಾಡಿದ್ದು, ಇದು ದೇಶಾದ್ಯಂತ ಇರುವ ಸಮಸ್ಯೆ ಎಂದು ಹೇಳ್ದಿದಾರೆ. 
ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿಕೆ ಸಿಂಗ್, ಇದು ಇಡಿ ಭಾರತದ ಸಮಸ್ಯೆಯಾಗಿದೆ, ಕೇವಲ ಪಶ್ಚಿಮ ಉತ್ತರ ಪ್ರದೇಶಕ್ಕಷ್ಟೇ ಏಕೆ ಸೀಮಿತಗೊಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. 
ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಸಚಿವರು ಉತ್ತರ ಪ್ರದೇಶಕ್ಕೆ ಬಂದಿದ್ದರು. ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸಾಮೂಹಿಕ ಹಲ್ಲೆಗಳ ಒಟ್ಟು 40 ಪ್ರಕರಣಗಳಲ್ಲಿ 45 ಜನರು ಮೃತಪಟ್ಟಿದ್ದಾರೆ. 
SCROLL FOR NEXT