ದೇಶ

ಸೋಮನಾಥ್ ಚಟರ್ಜಿ ಅಗಲಿಕೆ ನೋವು ತಂದಿದೆ: ರಾಷ್ಟ್ರಪತಿ ಕೋವಿಂದ್

Manjula VN
ನವದೆಹಲಿ: ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಅಗಲಿಕೆಯಿಂದ ಬಹಳ ನೋವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸೋಮನಾಥ್ ಚಟರ್ಜಿಯವರು ಲೋಕಸಭೆ ಸ್ಪೀಕ್ರ ಹಾಗೂ ಸಂಸತ್ತಿನ ಹಿರಿಯ ಸದಸ್ಯರಾಗಿದ್ದರು. ಸದನದಲ್ಲಿ ಹೆಚ್ಚಿನ ಬಲದಿಂದ ಉಪಸ್ಥಿತರಿರುತ್ತಿದ್ದರು. ಚಟರ್ಜಿ ಅಗಲಿಕೆ ಬಂಗಾಳ ಹಾಗೂ ಭಾರತಕ್ಕೆ ಭರಿಸಲಾಗದ ನಷ್ಟ. ಚಟರ್ಜಿಯವರ ಕುಟುಂಬದ ಕುರಿತು ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ. 
ಇದರಂತೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡ ಸಂತಾಪವನ್ನು ಸೂಚಿಸಿದ್ದು, ಲೋಸಸಭೆ ಮಾಜಿ ಸ್ಪೀಕರ್ ನಿಧನ ಸುದ್ದಿ ಬಹಳ ಬೇಸರವನ್ನುಂಟು ಮಾಡಿದೆ. ಸಂಸತ್ತಿನಲ್ಲಿ ಅತ್ಯುತ್ತಮ ಸದಸ್ಯರಾಗಿದ್ದರು. ಲೋಕಸಭೆಗೆ 10 ಬಾರಿ ಆಯ್ಕೆಯಾಗಿ ಬಂದಿದ್ದರು. ಸದಾಕಾಲ ಜನರ ಸಂಕಷ್ಟಗಳನ್ನು ಎಲ್ಲರ ಗಮನಕ್ಕೆ ತರುತ್ತಿದ್ದರು. ತಾವು ನಂಬಿದ್ದ ತತ್ವಗಳಿಗೆ ದೃಢವಾಗಿ ನಿಲ್ಲುತ್ತಿದ್ದರು ಎಂದು ತಿಳಿಸಿದ್ದಾರೆ. 
SCROLL FOR NEXT