ದೇಶ

ಪ್ರವಾಹ ಪೀಡಿತ ಕೇರಳದ ಜನರ 'ಹೋರಾಟದ ಛಲಕ್ಕೆ' ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Nagaraja AB

ನವದೆಹಲಿ:ಪ್ರವಾಹ ಪೀಡಿತ ಕೇರಳದ ಜನರ  'ಹೋರಾಟದ ಛಲಕ್ಕೆ' ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದೊಂದಿಗೆ ಇಡೀ ದೇಶವು ಬೆಂಬಲವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳ  ಪರಾಮರ್ಶೆಯ ಉನ್ನತ ಮಟ್ಟದ ಸಭೆಯ ನಂತರ ಸರಣಿ ಟ್ವೀಟ್ ಪ್ರಕಟಿಸಿರುವ ನರೇಂದ್ರಮೋದಿ,"ಕೇರಳದಾದ್ಯಂತ ನಿಲ್ಲದ ಪ್ರವಾಹದಿಂದಾಗಿ ತಮ್ಮ ಜೀವನವನ್ನು ಕಳೆದುಕೊಂಡವರ ಕುಟುಂಬಗಳು ನನ್ನ  ಮೊದಲ ಆಲೋಚನೆಗಳು, ಗಾಯಗೊಂಡವರು ಶೀಘ್ರದಲ್ಲಿಯೇ  ಚೇತರಿಕೆಗೊಳ್ಳಲಿ ಎಂದು ಆಶಿಸುತ್ತೇನೆ ಹಾಗೂ  ನಾವು ಕೇರಳದ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
SCROLL FOR NEXT