ಸಿಧು ತಲೆಗೆ 5 ಲಕ್ಷ ರೂಪಾಯಿ ಘೋಷಿಸಿದ ರಾಷ್ಟ್ರೀಯ ಬಜರಂಗ್ ದಳ
ಲಖನೌ: ಪ್ರವೀಣ್ ತೊಗಾಡಿಯಾ ಅವರ ರಾಷ್ಟ್ರೀಯ ಬಜರಂಗ ದಳ ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಅವರ ತಲೆಗೆ 5 ಲಕ್ಷ ರೂಪಾಯಿ ಘೋಷಣೆ ಮಾಡಿದೆ.
ರಾಷ್ಟ್ರೀಯ ಬಜರಂಗ ದಳದ ಆಗ್ರಾ ಜಿಲ್ಲಾಧ್ಯಕ್ಷ ಸಂಜಯ್ ಜಾಟ್ ಈ ಘೋಷಣೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿದ ಸಿಧು ಶಿರಚ್ಛೇಧ ಮಾಡಿದವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
ಸಿಧು ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿಕೊಂಡಿದ್ದಕ್ಕೆ ಸ್ವತಃ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿಧು ನಡೆ ಅಕ್ಷಮ್ಯವಾದದ್ದು, ಸಿಧು ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಬೇಕು, ಗುರುಗೋವಿಂದ್ ಸಿಂಗ್ ಅವರ ಬೋಧನೆಗಳನ್ನು ಸಿಧು ಮರೆತಿದ್ದಾರೆ. ನಮ್ಮ ಯೋಧರನ್ನು ಹತ್ಯೆ ಮಾಡುತ್ತಿರುವ ಪಾಕ್ ಸೇನೆಯ ಯೋಧರ ಮುಖ್ಯಸ್ಥರನ್ನು ಆಲಿಂಗನ ಹೇಗೆ ಸಾಧ್ಯ? ಎಂದು ಬಜರಂಗ ದಳ ಅಧ್ಯಕ್ಷ ಪ್ರಶ್ನಿಸಿದ್ದಾರೆ.
ಆಗ್ರಾಗೆ ಸಿಧು ಬಂದರೆ ಅವರಿಗೆ ಚಪ್ಪಲಿ ಹಾರ ಹಾಕುತ್ತಾರೆ ಎಂದು ಸಂಜಯ್ ಜಾಟ್ ಹೇಳಿದ್ದು, ಸಿಧು ಅವರ ಶಿರಚ್ಛೇಧ ಮಾಡಿದರೆ 5 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos