ಕೇರಳದಲ್ಲಿ ಕೋಮುಸೌಹಾರ್ದತೆ: ಜಲಾವೃತಗೊಂಡ ಮಸೀದಿ, ಹಿಂದೂ ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮ್ ಬಾಂಧವರು 
ದೇಶ

ಕೇರಳದಲ್ಲಿ ಕೋಮುಸೌಹಾರ್ದತೆ: ಜಲಾವೃತಗೊಂಡ ಮಸೀದಿ, ಹಿಂದೂ ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮ್ ಬಾಂಧವರು

ಕೇರಳದ ಹಿಂದೂಗಳು ಕೋಮುಸೌಹಾರ್ದತೆ ಮೆರೆದಿದ್ದು, ಮಸೀದಿ ಜಲಾವೃತಗೊಂಡಿದ್ದರಿಂದ ಮುಸ್ಲಿಂ ಸಮುದಾಯದವರಿಗೆ ದೇವಾಲಯದಲ್ಲೇ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕೇರಳದ ಹಿಂದೂಗಳು ಕೋಮುಸೌಹಾರ್ದತೆ ಮೆರೆದಿದ್ದು, ಮಸೀದಿ ಜಲಾವೃತಗೊಂಡಿದ್ದರಿಂದ ಮುಸ್ಲಿಂ ಸಮುದಾಯದವರಿಗೆ ದೇವಾಲಯದಲ್ಲೇ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ  ಅವಕಾಶ ಮಾಡಿಕೊಡಲಾಗಿದೆ. ಇರವಥೂರ್ ನಲ್ಲಿರುವ ಎಸ್ ಎನ್ ಡಿಪಿ ನಡೆಸುತ್ತಿರುವ ಪುರಪುಲ್ಲಿಕಾವು ರತ್ನೇಶ್ವರಿ ದೇವಾಲಯದಲ್ಲಿ ಆ.22 ರಂದು ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕೋಮುಸಾಮರಸ್ಯದ ಆದರ್ಶ ಪಾಲನೆಯಾಗಿದೆ. 
ಕೊಚುಕಡವು ಬಳಿ ಇರುವ ಜುಮಾ ಮಸೀದಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅಲ್ಲಿನ ಮೌಲ್ವಿ ಬೇರೆ ಸ್ಥಳವನ್ನು ಹುಡುಕುತ್ತಿದ್ದರು. ಇದನ್ನು ಅರಿತ ದೇವಾಲಯದ ಸಿಬ್ಬಂದಿಗಳು, ದೇವಾಲಯದ ಭಾಗವಾಗಿರುವ ವಿಶಾಲವಾದ ಹಾಲ್ ನ್ನು  ಪ್ರಾರ್ಥನೆ ಮಾಡುವುದಕ್ಕೆ ಮುಸ್ಲಿಂ ಬಾಂಧವರಿಗೆ ಬಿಟ್ಟುಕೊಟ್ಟಿದ್ದಾರೆ. 
ಜಲಾವೃತಗೊಂಡಿದ್ದ ಮಸೀದಿ ಬುಧವಾರದ ವೇಳೆಗೆ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ಈ ವಿಷಯ ದೇವಾಲಯದ ಸಿಬ್ಬಂದಿಗೂ ತಿಳಿಯಿತು. ತಕ್ಷಣವೇ ನಮಗೆ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ದೇವಾಲಯದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮಸೀದಿಯ ಸಮಿತಿಯ ಅಧ್ಯಕ್ಷ ಪಿಎ ಖಾಲೀದ್ ಸಂತಸ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸಿಬ್ಬಂದಿಗಳದ ಕ್ರಮದಿಂದಾಗಿ ಸುಮಾರು 200 ಕ್ಕೂ ಹೆಚ್ಚು ಮುಸ್ಲಿಮರು ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿ ಸಂತಸದಿಂದ ವಾಪಸ್ ತೆರಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT