ನವದೆಹಲಿ: ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರು ಪ್ರಸ್ತಾವ ವಿಚಾರದ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ ನಂತರ ಅಂತಹ ಪ್ರಸ್ತಾವವಿಲ್ಲಾ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಹೇಳಿಕೆ ನೀಡಿದೆ.
ವಾಜಪೇಯಿ ಹೆಸರು ಪ್ರಸ್ತಾವ ಕುರಿತು ಸುದ್ದಿಗಳನ್ನು ಟೀಕಿರುವ ಕ್ರೇಜ್ರಿವಾಲ್, ವಾಜಪೇಯಿ ಮರಣದ ನಂತರ ಅವರ ಹೆಸರನ್ನು ರಾಮಲೀಲಾ ಮೈದಾನಕ್ಕೆ ಇಡುವುದರಿಂದ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ, ಬಿಜೆಪಿ ಕೆಲ ಮತಗಳನ್ನು ಪಡೆಯಬೇಕಾದರೆ ಪ್ರಧಾನ ಮಂತ್ರಿ ಸ್ಥಾನದಿಂದ ನರೇಂದ್ರಮೋದಿ ಅವರ ಹೆಸರನ್ನು ತೆಗೆದುಹಾಕಬೇಕಾಗುತ್ತದೆ. ಏಕೆಂದರೆ ಆ ಹೆಸರಿಗೆ ಜನರು ಮತ ನೀಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.