ರಕ್ಷಾ ಬಂಧನ: ನಕ್ಸಲ್ ಕಾರ್ಯಾಚರಣೆ ವೇಳೆ ಹುತಾತ್ಮನಾದ ಅಣ್ಣ- ಪ್ರತಿಮೆಗೇ ರಾಖಿ ಕಟ್ಟಿ ಕಣ್ಣೀರಿಟ್ಟ ಸಹೋದರಿ
ದಂತೇವಾಡ: ದೇಶದಾದ್ಯಂತ ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ತಮ್ಮ ಪ್ರೀತಿಯ ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದರೆ ಇಲ್ಲೊಬ್ಬ ಸಹೋದರಿ ನೋವಿನಿಂದ ರಕ್ಷಾಬಂಧನ ದಿನವನ್ನು ಆಚರಣೆ ಮಾಡಿದ್ದಾಳೆ.
ಸುಕ್ಮಾದ ತೊಂಗಪಾಲ್ ಎಂಬದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ಸಹೋದರ 2014ರಲ್ಲಿ ನಕ್ಸಲರ ಗುಂಡಿಗೆ ಬಲಿಯಾಗಿದ್ದರು.
ಸಹೋದರನೊಂದಿಗೆ ಆತ್ಮೀಯ ಬಂಧನವನ್ನು ಹೊಂದಿದ್ದೆ. ತೊಂಗಪಾಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಅಣ್ಣ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ 2014ರಲ್ಲಿ ಹುತಾತ್ಮನಾಗಿದ್ದ. ರಕ್ಷಾಬಂಧನ ದಿನದಂದು ಸಹೋದರನಿಲ್ಲ. ಬಹಳ ದುಃಖವಾಗುತ್ತಿದೆ. ಆತನಿಗಾಗಿರುವ ರಾಖಿಯನ್ನು ಮತ್ತೊಬ್ಬರಿಗೆ ಕಟ್ಟಲು ನನಗೆ ಇಷ್ಟವಿಲ್ಲ. ಆದರೆ, ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ. ನನಗಿದ್ದದ್ದು ಒಬ್ಬನೇ ಅಣ್ಣ. ಆತನನ್ನು ಕಳೆದುಕೊಂಡಿದ್ದೇನೆ. ಇದೀಗ ಆತನ ಪ್ರತಿಮೆಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದೇನೆಂದು ಯುವತಿ ಹೇಳಿದ್ದಾಳೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos