ಸಾಂದರ್ಭಿಕ ಚಿತ್ರ 
ದೇಶ

ಪೊಲೀಸರ ಬಳಿ ಆರೆಸ್ಟ್ ವಾರೆಂಟ್ ಇರಲಿಲ್ಲ : ಹೋರಾಟಗಾರ್ತಿ ಸುಧಾ ಭಾರಾದ್ವಾಜ್ ಪುತ್ರಿ ಹೇಳಿಕೆ

ಪ್ರಸ್ತುತ ಆಡಳಿತ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.

ಮುಂಬೈ: ಪ್ರಸ್ತುತ ಆಡಳಿತ ಯುಗದಲ್ಲಿ  ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ   ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.

ನಿನ್ನೆ ದಿನ ಸುಧಾ ಭಾರಾದ್ವಾಜ್ ಸೇರಿದಂತೆ ಅನೇಕ ಎಡಪಂಥೀಯ ಧೋರಣೆವುಳ್ಳ ಹೋರಾಟಗಾರನ್ನು ಬಂಧಿಸಲಾಗಿತ್ತು. ಫಾರಿದಾಬಾದಿನ ನಿವಾಸದಲ್ಲಿ ನಿನ್ನೆ ಬಂಧಿಸಲಾಗಿದ್ದ ಸುಧಾ ಭಾರಾದ್ವಾಜ್ ಇಂದು ವಕೀಲರನ್ನು ಮಾತ್ರ ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿದ್ದರು.

ದಲಿತರು, ಬುಡಕಟ್ಟು ಸಮುದಾಯದ ಹಕ್ಕು  ಅಥವಾ ಮಾನವ ಹಕ್ಕುಗಳನ್ನು ವಿರೋಧಿಸುವವರು  ಇದರ ಸುತ್ತ ಇರುವರೆಂಬುದು ನನ್ನ ಚಿಂತನೆಯಾಗಿದೆ.  ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ಎಲ್ಲಾವನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ಜೀ- ಮೇಲ್,  ಟ್ವೀಟರ್ ಫಾಸ್ ವರ್ಡ್ ಕೂಡಾ ಪಡೆಯಲಾಗಿದೆ ಎಂದು ಸುಧಾ ಭಾರಾದ್ವಾಜ್ ತಿಳಿಸಿದರು.

ಪ್ರಜಾಸತತ್ಮಕ ಹಕ್ಕುಗಳ ಮೇಲೆ ಲಜ್ಜೆಗೆಟ್ಟ ದಾಳಿ ಇದಾಗಿದ್ದು, ಕರಾಳ ತುರ್ತುಪರಿಸ್ಥಿತಿ ಸಂದರ್ಭ ನೆನಪಿಸುತ್ತದೆ ಎಂದು ಸುಧಾ ಭಾರಾದ್ವಾಜ್  ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ದಾಳಿ ನಡೆಸಿದ ಸಂದರ್ಭ ಬಂದಿದ್ದ 10 ಪೊಲೀಸರಲ್ಲಿ  ಹರಿಯಾಣದ  ಕೇವಲ ಒಬ್ಬರೇ ಮಾತ್ರ ಮಹಿಳಾ ಕಾನ್ಸ್ ಟೇಬಲ್ ಇದ್ದರು.  ಉಳಿದವರು ಮಹಾರಾಷ್ಟ್ರ ಪೊಲೀಸರು.  ಸುಧಾ ಭಾರಾದ್ವಾಜ್  ಸರ್ಜ್ ವಾರೆಂಟ್ ಕೇಳಿದ್ದಾಗ ಅವರ ಬಳಿ ಇರಲಿಲ್ಲ ಎಂದು ಸುಧಾ ಭಾರಾದ್ವಾಜ್   ಪುತ್ರಿ ಅನು ಭಾರಾದ್ವಾಜ್  ತಿಳಿಸಿದರು.

ಪೊಲೀಸರು ಇನ್ನಿತರ ಕೆಲ ದಾಖಲೆಗಳನ್ನು ಹೊಂದಿದ್ದರಿಂದ ಮನೆ ಒಳಗಡೆ ಬರಲು ತಮ್ಮ ತಾಯಿ ಅವಕಾಶ ಮಾಡಿಕೊಟ್ಟರು . ಆರೋಪಗಳ ಬಗ್ಗೆ ನನ್ನಗೆ ಏನೂ ಗೊತ್ತಿಲ್ಲ. ಆದರೆ, ಪುಣೆಗೆ ಸಂಬಂಧಿಸಿದ ವಿಷಯದಲ್ಲಿ ಬಂಧನಕ್ಕೆ ಬಂದಿರುವುದಾಗಿ ತಮ್ಮ ತಾಯಿ ತಿಳಿಸಿದರು ಎಂದು ಅನು ಭಾರಾದ್ವಾಜ್ ಹೇಳಿದರು.

ನಕ್ಸಲ್ ಜೊತೆಗೆ ನಂಟಿನ ಆರೋಪದ ಮೇರೆಗೆ  ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾಮಾಜಿಕ ಹೋರಾಟಗಾರರ ಮನೆಗಳ ಮೇಲೆ ಪುಣೆ ಪೊಲೀಸರು ದಾಳಿ ನಡೆಸಿ ಸುಧಾ ಬಾರಾದ್ವಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT