ಸಾಂದರ್ಭಿಕ ಚಿತ್ರ 
ದೇಶ

ಪೊಲೀಸರ ಬಳಿ ಆರೆಸ್ಟ್ ವಾರೆಂಟ್ ಇರಲಿಲ್ಲ : ಹೋರಾಟಗಾರ್ತಿ ಸುಧಾ ಭಾರಾದ್ವಾಜ್ ಪುತ್ರಿ ಹೇಳಿಕೆ

ಪ್ರಸ್ತುತ ಆಡಳಿತ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.

ಮುಂಬೈ: ಪ್ರಸ್ತುತ ಆಡಳಿತ ಯುಗದಲ್ಲಿ  ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ   ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.

ನಿನ್ನೆ ದಿನ ಸುಧಾ ಭಾರಾದ್ವಾಜ್ ಸೇರಿದಂತೆ ಅನೇಕ ಎಡಪಂಥೀಯ ಧೋರಣೆವುಳ್ಳ ಹೋರಾಟಗಾರನ್ನು ಬಂಧಿಸಲಾಗಿತ್ತು. ಫಾರಿದಾಬಾದಿನ ನಿವಾಸದಲ್ಲಿ ನಿನ್ನೆ ಬಂಧಿಸಲಾಗಿದ್ದ ಸುಧಾ ಭಾರಾದ್ವಾಜ್ ಇಂದು ವಕೀಲರನ್ನು ಮಾತ್ರ ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿದ್ದರು.

ದಲಿತರು, ಬುಡಕಟ್ಟು ಸಮುದಾಯದ ಹಕ್ಕು  ಅಥವಾ ಮಾನವ ಹಕ್ಕುಗಳನ್ನು ವಿರೋಧಿಸುವವರು  ಇದರ ಸುತ್ತ ಇರುವರೆಂಬುದು ನನ್ನ ಚಿಂತನೆಯಾಗಿದೆ.  ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ಎಲ್ಲಾವನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ಜೀ- ಮೇಲ್,  ಟ್ವೀಟರ್ ಫಾಸ್ ವರ್ಡ್ ಕೂಡಾ ಪಡೆಯಲಾಗಿದೆ ಎಂದು ಸುಧಾ ಭಾರಾದ್ವಾಜ್ ತಿಳಿಸಿದರು.

ಪ್ರಜಾಸತತ್ಮಕ ಹಕ್ಕುಗಳ ಮೇಲೆ ಲಜ್ಜೆಗೆಟ್ಟ ದಾಳಿ ಇದಾಗಿದ್ದು, ಕರಾಳ ತುರ್ತುಪರಿಸ್ಥಿತಿ ಸಂದರ್ಭ ನೆನಪಿಸುತ್ತದೆ ಎಂದು ಸುಧಾ ಭಾರಾದ್ವಾಜ್  ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ದಾಳಿ ನಡೆಸಿದ ಸಂದರ್ಭ ಬಂದಿದ್ದ 10 ಪೊಲೀಸರಲ್ಲಿ  ಹರಿಯಾಣದ  ಕೇವಲ ಒಬ್ಬರೇ ಮಾತ್ರ ಮಹಿಳಾ ಕಾನ್ಸ್ ಟೇಬಲ್ ಇದ್ದರು.  ಉಳಿದವರು ಮಹಾರಾಷ್ಟ್ರ ಪೊಲೀಸರು.  ಸುಧಾ ಭಾರಾದ್ವಾಜ್  ಸರ್ಜ್ ವಾರೆಂಟ್ ಕೇಳಿದ್ದಾಗ ಅವರ ಬಳಿ ಇರಲಿಲ್ಲ ಎಂದು ಸುಧಾ ಭಾರಾದ್ವಾಜ್   ಪುತ್ರಿ ಅನು ಭಾರಾದ್ವಾಜ್  ತಿಳಿಸಿದರು.

ಪೊಲೀಸರು ಇನ್ನಿತರ ಕೆಲ ದಾಖಲೆಗಳನ್ನು ಹೊಂದಿದ್ದರಿಂದ ಮನೆ ಒಳಗಡೆ ಬರಲು ತಮ್ಮ ತಾಯಿ ಅವಕಾಶ ಮಾಡಿಕೊಟ್ಟರು . ಆರೋಪಗಳ ಬಗ್ಗೆ ನನ್ನಗೆ ಏನೂ ಗೊತ್ತಿಲ್ಲ. ಆದರೆ, ಪುಣೆಗೆ ಸಂಬಂಧಿಸಿದ ವಿಷಯದಲ್ಲಿ ಬಂಧನಕ್ಕೆ ಬಂದಿರುವುದಾಗಿ ತಮ್ಮ ತಾಯಿ ತಿಳಿಸಿದರು ಎಂದು ಅನು ಭಾರಾದ್ವಾಜ್ ಹೇಳಿದರು.

ನಕ್ಸಲ್ ಜೊತೆಗೆ ನಂಟಿನ ಆರೋಪದ ಮೇರೆಗೆ  ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾಮಾಜಿಕ ಹೋರಾಟಗಾರರ ಮನೆಗಳ ಮೇಲೆ ಪುಣೆ ಪೊಲೀಸರು ದಾಳಿ ನಡೆಸಿ ಸುಧಾ ಬಾರಾದ್ವಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT