ದೇಶ

ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ: ಟಾಲ್ ಸ್ಟಾಯ್ ತಾಳ್ಮೆ ನೆನಪಿಸಿದ ರಾಹುಲ್ ಗಾಂಧಿ

Nagaraja AB
ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿಗಳಾದ  ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಚರ್ಚೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟ್  ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮಾತುಕತೆ ಬಳಿಕ ರಾಹುಲ್ ಗಾಂಧಿ ಸಾಹಿತಿ ಲಿಯೊ ಟಾಯ್ ಸ್ಟಾಯ್ ನ ಸಾಲುಗಳನ್ನು   ಒಳಗೊಂಡ ಟ್ವೀಟ್ ಮಾಡಿದ್ದು, ಕಮಲ್ ನಾಥ್ ಮತ್ತು ಸಿಂದಿಯಾ ಇರುವ ಪೋಟೋ ಪ್ರಕಟಿಸಿ, ತಾಳ್ಮೆ ಮತ್ತು ಸಮಯದ ಅತ್ಯಂತ ಬಲಿಷ್ಠ ಯೋಧರು  ಎಂದು ಬರೆದುಕೊಂಡಿದ್ದಾರೆ.
ಈ ಮಧ್ಯೆ  ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಜೋತ್ಯಿರಾದಿತ್ಯ  ಸಿಂಧಿಯಾ, ಇದು ಸ್ಪರ್ಧೆಯಲ್ಲ, ಇದು ಕುರ್ಚಿಗೆ ಸಂಬಂಧಿಸಿದಲ್ಲ, ಮಧ್ಯಪ್ರದೇಶದ ಜನರ ಸೇವೆಗಾಗಿ ಇಲ್ಲಿದ್ದೇವೆ. ಸದ್ಯ ಭೋಪಾಲ್ ನತ್ತ ಮರಳುತ್ತಿದ್ದು, ನಿರ್ಧಾರದ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.
SCROLL FOR NEXT