ದೇಶ

ಅಕ್ಕನ ಕಣ್ಣೆದುರೆ ಭಾವನಿಗೆ ಚೂರಿಯಿಂದ ಇರಿದು ಭೀಕರ ಕೊಲೆ, ಸಹಾಯಕ್ಕೆ ಬಾರದೆ ವಿಡಿಯೋ ಮಾಡಿದ ಜನ!

Vishwanath S
ಬೀಡ್ (ಮಹಾರಾಷ್ಟ್ರ): ಸಹೋದರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಸಹೋದರ ಆಕೆಯ ಕಣ್ಣ ಮುಂದೆ ಭಾವನನ್ನು ಹರಿತವಾದ ಚೂರಿಯಿಂದ ಹಲವು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಸುಮಿತ್ ಶಿವರಾಜ್ ವಾಗ್ರೆ ಮತ್ತು ಆತನ ಪತ್ನಿ ಭಾಗ್ಯಶ್ರೀ ತೆಲ್ಗಾನ್ ಪ್ರದೇಶದಲ್ಲಿರುವ ಆದಿತ್ಯ ಇಂಜಿನಿಯರ್ ಕಾಲೇಜಿನಿಂದ ಹೊರಬರುತ್ತಿದ್ದಂತೆ ಅವರ ಮುಂದೆ ನಿಂತ ಭಾಗ್ಯಶ್ರೀ ಸಹೋದರ ಹಾಗೂ ಆತನ ಸ್ನೇಹಿತ ಇಬ್ಬರು ಸೇರಿ ಸುಮಿತ್ ಗೆ ಚೂರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಮಿತ್ ನನ್ನು ರಕ್ಷಿಸಲು ಭಾಗ್ಯಶ್ರೀ ಸಹಾಯಕ್ಕಾಗಿ ಅಂಗಲಾಚಿ ಬೇಡುತ್ತಿದ್ದರು. ಅಲ್ಲಿ ನೆರೆದಿದ್ದ ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ಆಟೋ ಚಾಲಕನೊಬ್ಬ ಆಕೆಯ ಸಹಾಯಕ್ಕೆ ಬಂದಿದ್ದು ಕೂಡಲೇ ಸುಮಿತ್ ನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಸುಮಿತ್ ಮೃತಪಟ್ಟಿದ್ದಾರೆ.
SCROLL FOR NEXT