ಮುಂಬೈನಲ್ಲಿ ಅಗ್ನಿ ಅನಾಹುತ: ನಾಲ್ವರು ಹಿರಿಯ ನಾಗರಿಕರ ದುರ್ಮರಣ 
ದೇಶ

ಮುಂಬೈನಲ್ಲಿ ಅಗ್ನಿ ಅನಾಹುತ: ನಾಲ್ವರು ಹಿರಿಯ ನಾಗರಿಕರ ದುರ್ಮರಣ

ಮುಂಬೈನ ಪೂರ್ವ ಉಪನಗರ ಚೆಂಬೂರ್ ನ ತಿಲಕ್ ನಗರದಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಿಂದ ನಾಲ್ವರು ಹಿರಿಯ ನಾಗರಿಕರು ಸಾವವನ್ನಪ್ಪಿದ್ದಾರೆ.

ಮುಂಬೈ: ಮುಂಬೈನ ಪೂರ್ವ ಉಪನಗರ ಚೆಂಬೂರ್ ನ ತಿಲಕ್ ನಗರದಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಿಂದ ನಾಲ್ವರು ಹಿರಿಯ ನಾಗರಿಕರು ಸಾವವನ್ನಪ್ಪಿದ್ದಾರೆ.
ಸಂಗಮ್ ಸೊಸೈಟಿಯ 10ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಸುಮಾರು 16 ಅಂತಸ್ತಿನ ಕಟ್ಟಡದ ಸುತ್ತಲೂ ಸುಮಾರು 10  ಅಗ್ನಿಶಾಮಕ ವಾಹನಗಳು ರ್ ಮತ್ತು ಐದು ಟ್ಯಾಂಕರ್ ಗಳೂ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.
ಸುಮಾರು 10.20 ಗಂಟೆ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು  ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅದು ಒಂದು ದೊಡ್ಡ ಸ್ಫೋಟದ ನಂತರ ಹರಡಿತ್ತು ಎನ್ನಲಾಗಿದೆ. ಗ್ಯಾಸ್ ಸಿಲಿಂಡರ್,ಸ್ಪೋಟದಿಂದ ಈ ಅವಘಡ ಉಂತಾಗಿರಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ಮೃತರನ್ನು ಸುನೀತಾ ಮತ್ತು ಭಾಲಚಂದ್ರ (72), ಸುಮನ್ (83) ಮತ್ತು ಶ್ರೀನಿವಾಸ್ (86) ಎಂದು ಗುರುತಿಸಲಾಗಿದೆ. ಈ ಎಲ್ಲರೂ ಜೋಷಿ ಕುಟುಂಬಕ್ಕೆ ಸೇರಿದ್ದರು.
ಕಳೆದ ವಾರದ ಮುಂಬೈನ ನಾನಾ ಕಡೆ ನಡೆದ ಬೆಂಕಿ ಅನಾಹುತದಲ್ಲಿ ಸುಮಾರು 20 ಮಂದಿ ಮರಣಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT