ವಸುಂಧರಾ ರಾಜೆ 
ದೇಶ

ಚುನಾವಣಾ ಅಖಾಡ: ರಾಜಸ್ಥಾನದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ, ತೆರಿಗೆ ವಿನಾಯ್ತಿ!

ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ರಾಜಸ್ಥಾನ ರೈತರು ಹಾಗೂ ಮಧ್ಯಮವರ್ಗದ ಜನತೆಯ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 2018-19 ನೇ ಸಾಲಿನ ಬಜೆಟ್ ನಲ್ಲಿ 8,000 ಕೋಟಿ ರೂಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದೆ

ಜೈಪುರ: ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ರಾಜಸ್ಥಾನ ರೈತರು ಹಾಗೂ ಮಧ್ಯಮವರ್ಗದ ಜನತೆಯ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 2018-19 ನೇ ಸಾಲಿನ ಬಜೆಟ್ ನಲ್ಲಿ 8,000 ಕೋಟಿ ರೂಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದ್ದು 650 ಕೋಟಿ ರೂಪಾಯಿಗಳಷ್ಟು ತೆರಿಗೆ ವಿನಾಯ್ತಿ ಹಾಗೂ ಸಾಮಾಜಿಕ ಹಾಗೂ ಸಮುದಾಯ ಯೋಜನೆಗಳಿಗೆ ಖರ್ಚು ಮಾಡುವುದಕ್ಕಾಗಿ 44,135 ಕೋಟಿ ರೂ ಮೀಸಲಿರಿಸಲಾಗಿದೆ.  
ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದ್ದು, ಎಲ್ಲಾ ವರ್ಗದವರಿಗೂ ಮೂಲಸೌಕರ್ಯ, ವೈದ್ಯಕೀಯ, ಆರೋಗ್ಯ, ಕೈಗಾರಿಕೆ, ಶಿಕ್ಷಣ ಸೌಲಭ್ಯಗಳು ತಲುಪುವ ಉದ್ದೇಶ ಹೊಂದಲಾಗಿದೆ ಎಂದು ಸಿಎಂ ವಸುಂಧರಾ ರಾಜೆ ಹೇಳಿದ್ದಾರೆ. 
ಹಣಕಾಸು ಸಚಿವರೂ ಆಗಿರುವ ವಸುಂಧರಾ ರಾಜೆ, ಒಟ್ಟಾರೆ ವಿವಿಧ ಯೋಜನೆಗಳನ್ನೊಳಗೊಂಡ 1,07,865.40 ಕೋಟಿ ರೂಪಾಯಿಯಷ್ಟು ಬಜೆಟ್ ಮಂಡಿಸಿದ್ದಾರೆ. 
ಸಾಮಾಜಿಕ ಹಾಗೂ ಸಮುದಾಯಗಳಿಗಾಗಿ ಬಜೆಟ್ ನ ಶೇ.40.92 ರಷ್ಟನ್ನು ಮೀಸಲಿರಿಸಲಾಗಿದ್ದು, ಇಂಧನ ಕ್ಷೇತ್ರಕ್ಕೆ ಶೇ.25.08 ರಷ್ಟನ್ನು ಮೀಸಲಿರಿಸಲಾಗಿದ್ದರೆ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಶೇ.13.42 ರಷ್ಟು ಅನುದಾನ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

ಪೋಕ್ಸೋ ಪ್ರಕರಣ: ವಚನಾನಂದ ಶ್ರೀಗೆ ಹೈಕೋರ್ಟ್​ ಬಿಗ್ ಶಾಕ್; ನಿರೀಕ್ಷಣಾ ಜಾಮೀನು ರದ್ದು

ಬಾಂಗ್ಲಾದೇಶ: ದೀಪು ದಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ?, Video!

Karisma Kapoor Birthday: ಮದುವೆಗೂ ಮುನ್ನ ಅಭಿಷೇಕ್ ಬಚ್ಚನ್ ಜೊತೆ ಕರಿಷ್ಮಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣವೇನು?

ಆಣೆ-ಪ್ರಮಾಣಕ್ಕೆ ಬ್ರೇಕ್: ಏಕಾಂಗಿಯಾದ ಬಿ.ವೈ ವಿಜಯೇಂದ್ರ; ಧರ್ಮಸ್ಥಳಕ್ಕೆ ಒಬ್ಬರೇ ಭೇಟಿ!