ನವದೆಹಲಿ: "ಹಿಂದೆಲ್ಲಾ ಕಾಂಗ್ರೆಸ್ ಪಕ್ಷವು ಹಗರಣದಿಂಡ ಲಾಭ ಮಾಡಿಕೊಳ್ಳುತಿತ್ತು. ಈಗ ಬಿಜೆಪಿ, ತಾನು ಲಾಭ ಕಾಣುತ್ತಿದೆ" ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಇದೇ ಕಾರಣದಿಂದ ಬಿಜೆಪಿಯವರು ಯಾವುದೇ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣವು 2011ರಿಂದ ಪ್ರಾರಂಭಗೊಂಡು ಇಂದಿನವರೀಗೆ ಮುಂದುವರಿದಿದೆ.
'ಹಗರಣದ ಬಗೆಗೆ ಕಾಂಗ್ರೆಸ್ ಬಿಜೆಪಿಯನ್ನು ದೂರುತ್ತದೆ, ಬಿಜೆಪಿ ಕಾಂಗ್ರೆಸ್ ಇದಕ್ಕೆ ಹೊಣೆ ಎನ್ನುತ್ತದೆ. ಆದರೆ ಸತ್ಯ ಸಂಗತಿ ಏನೆಂದರೆ ಕಾಂಗ್ರೆಸ್ ಅವಧಿಯಲ್ಲಿ ಪ್ರಾರಂಭಗೊಂಡ ಎಲ್ಲಾ ವಂಚನೆ ಪ್ರಕರಣಗಳು ಇಂದಿಗೂ ಮುಂದುವರಿದಿದೆ. ಮೊದಲು ಕಾಂಗ್ರೆಸ್ ಈ ಹಗರಣಗಳಿಂದ ಹಣ ಮಾಡುತ್ತಿತ್ತು. ಈಗ ಬಿಜೆಪಿ ಕೂಡ ಅದನ್ನೇ ಮಾಡುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರ ಇದುವರೆಗೆ ಕಾಂಗ್ರೆಸ್ ನ ಯಾರೊಬ್ಬರನ್ನೂ ಜೈಲಿಗೆ ಕಳಿಸಿಲ್ಲ.' ಕೇಜ್ರಿವಾಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.