ಜಮ್ಮು: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿರುವ ಗಡಿ ಭಾಗದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಮತ್ತೊಂದು ಒಳನುಸುಳುವಿಕೆಯ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ರಕ್ಷಣಾ ಇಲಾಖೆ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಸಂಜೆ 5:15 ರ ವೇಳೆಗೆ ಪಾಕಿಸ್ತಾನದ ಸೇನೆ ಎಲ್ಒಸಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆಗೆ ಸಹಕಾರಿಯಾಗುವಂತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿತು. ಗಡಿಯಲ್ಲಿ ಎಚ್ಚರವಾಗಿದ್ದ ಭಾರತೀಯ ಸೇನೆ ತಕ್ಷಣವೇ ಆಟೋಮೆಟಿಕ್ ಫೈರ್ ನಿಂದ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ನಿಗ್ರಹಿಸಿದ್ದು, ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಖಾರಿ ಕರ್ಮಾರ ಸೆಕ್ಟರ್ ನಲ್ಲಿಯೂ ಪಾಕ್ ಸೇನೆ 15 ನಿಮಿಷಗಳ ಕಾಲ ಸಣ್ಣ ಹಾಗೂ ಬೃಹತ್ ಶಸ್ತ್ರಾಸ್ತ್ರಗಳ ನೆರವಿನಿಂದ ಗುಂಡಿನ ದಾಳಿ ನಡೆಸಿತ್ತು ಪಾಕಿಸ್ತಾನ ನಡೆಸಿರುವ ದಾಳಿಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ.