ಪಣಜಿ: ಗೋವಾ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಬಳಿಕ ಅದನ್ನು ಹಿಂಪಡೆದಿದ್ದ ಪತ್ರಕರ್ತನಿಗೆ ಸೋಮವಾರ ಗೋವಾ ವಿಧಾನಸಭೆ ಪ್ರವೇಶ ನಿಷೇಧಿಸಲಾಗಿದೆ.
ಗೋವಾದಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಅದರ ವರದಿ ಮಾಡಲು ಆಗಮಿಸಿದ್ದ ಗೋವಾ ಜಂಕ್ಷನ್.ಕಾಮ್ ಪತ್ರಕರ್ತ ಹರಿಶ್ ವೊಲ್ವೋಕರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.
ವಿಧಾನಸಭೆ ಪ್ರವೇಶಿಸಲು ಅಗತ್ಯವಾದ ಭದ್ರತಾ ಪಾಸ್ ನನ್ನ ಬಳಿ ಇದ್ದರೂ ವಿಧಾನಸಭೆ ಆವರದಣ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ವೊಲ್ವೋಕರ್ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ಭದ್ರತಾ ಅಧಿಕಾರಿ ಆತ್ಮರಾಮ್ ಬರ್ವೆ ಅವರು, ಈ ಕುರಿತು ಸ್ಪೀಕರ್ ಪ್ರಮೋದ್ ಸಾವಂತ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಕಳೆದ ಶನಿವಾರ ಗೋವಾ ಸಿಎಂ ಮನೋಹರ್ ಪರಿಕ್ಕರ್ ತೀವ್ರ ಅನಾರೋಗ್ಯಕ್ಕಿಡಾಗಿದ್ದಾರೆ ಎಂದು ವರದಿ ಮಾಡಿತ್ತು. ಬಳಿಕ ಆ ವರದಿಯನ್ನು ಹಿಂಪಡೆದಿತ್ತು.