ಮುಜಾಫರ್ ಪುರ ಅಪಘಾತ: ನಿತೀಶ್ ರತ್ತ ಬೆರಳು ತೋರಿದ ರಾಹುಲ್ ಗಾಂಧಿ 
ದೇಶ

ಮುಜಾಫರ್ ಪುರ ಅಪಘಾತ: ನಿತೀಶ್ ರತ್ತ ಬೆರಳು ತೋರಿದ ರಾಹುಲ್ ಗಾಂಧಿ

ಬಿಹಾರ ಮುಜಾಫರ್ ಪುರದಲ್ಲಿ ನಡೆದ ಅಪಘಾತಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಣೆ ಎಂದು ರಾಹುಲ್ ಹೇಳಿದ್ದಾರೆ.

ನವದೆಹಲಿ: ಬಿಹಾರ ಮುಜಾಫರ್ ಪುರದಲ್ಲಿ ನಡೆದ ಅಪಘಾತಕ್ಕೆ  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಣೆ ಎಂದು ರಾಹುಲ್ ಹೇಳಿದ್ದಾರೆ.
"ಮದ್ಯ ನಿಷೇಧವಾಗಿರುವ ಬಿಹಾರದಲ್ಲಿ ಮದ್ಯ ಸೇವಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕರು ಒಂಭತ್ತು ಮುಗ್ದ ಮಕ್ಕಳ ಹತ್ಯೆಗೆ ಕಾರಣರಾಗಿದ್ದಾರೆ! ನಿತೀಶ್ ಜೀ, ಇದು ನಿಮ್ಮ ಮದ್ಯ ನಿಷೇಧ ಕ್ರಮದ ಲಕ್ಷಣವೆ?ನಿಮ್ಮ ಆತ್ಮಸಾಕ್ಷಿ ಯಾರನ್ನು ಬೆಂಬಲಿಸಿದೆ, ಬಿಹಾರದ ಮದ್ಯ ನಿಷೇಧ ಕ್ರಮದ ವಾಸ್ತವತೆಯನ್ನೋ ಅಥವಾ ಬಿಜೆಪಿಯ ನಾಯಕನನ್ನೊ?" ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದೇ ಶನಿವಾರದಂದು ಮುಜಾಫರ್ ಪುರದ ಅಹಿಯಾಪುರ್ ಎನ್ನುವಲ್ಲಿ ಕಾರೊಂದು ಸರ್ಕಾರಿ ಶಾಲಾ ಕಟ್ಟಡಕ್ಕೆ ಗುದ್ದಿದ ಪರಿಣಾಮ ಒಂಭತ್ತು ಮಕ್ಕಳು ಸತ್ತು 24 ಮಂದಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಬಳಿಕ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಅಪಘಾತಕ್ಕೆ ಕಾರಣವಾದ ಕಾರು ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಸೇರಿದೆ ಎಂದು ಆರೋಪಿಸಿದ್ದರು.
ಇದೇ ವೇಳೆ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ. 
ಅಪಘಾತಕ್ಕೆ ಕಾರಣವಾದ ಕಾರು ಚಾಲಕನನ್ನು ಗುರುತಿಸಲಾಗಿದೆ ಎಂದು ಬಿಹಾರದ ಪೋಲೀಸರು ಸೋಮವಾರ ತಿಳಿಸಿದ್ದು ಕಾರು ಬಿಜೆಪಿ ನಾಯಕರಿಗೆ ಸೇರಿದ್ದೆ ಎನ್ನುವ ಕುರಿತಂತೆ ಸ್ಪಷ್ಟಪಡಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT