ದೆಹಲಿ: ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಂದು ಬೆಳಗ್ಗೆ ಸಿಬಿಐ ಬಂಧಿಸಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂನನ್ನು ಒಂದು ದಿನ ಪೊಲೀಸರ ವಶಕ್ಕೆ ವಿಚಾರಣಾ ನ್ಯಾಯಾಲಯ ಒಪ್ಪಿಸಿದೆ.
ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರ ಬಂಧಿಸಲಾಗಿದ್ದು,ಎರಡು ವಾರಗಳ ಕಾಲ ತಮ್ಮ ವಶಕ್ಕೆ ಪಡೆಯಲು ಸಿಬಿಐ ಪ್ರಯತ್ನಿಸಿತು. ಆದರೆ,ನ್ಯಾಯಾಲಯ ಒಂದು ದಿನ ವಶಕ್ಕ ಒಪ್ಪಿಸಿದೆ.
ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಚೆನ್ನೈವಿಮಾನ ನಿಲ್ದಾಣದಲ್ಲಿ ಕಾರ್ತಿ ಚಿದಂಬರಂನನ್ನು ಸಿಬಿಐ ಬಂಧಿಸಿತ್ತು.