ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ 
ದೇಶ

ಪುತ್ರನಿಗೆ ಉದ್ಯಮದಲ್ಲಿ ನೆರವು ನೀಡುವಂತೆ ಚಿದಂಬರಂ ಕೇಳಿದ್ದರು: ಇಂದ್ರಾಣಿ, ಪೀಟರ್ ಮುಖರ್ಜಿ

ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಪಿ. ಚಿದಂಬರಂ ಅವರು ನಮ್ಮನ್ನು ಕೇಳಿದ್ದರು, ಚಿದಂಬರಂ ಅವರ ಮಾತಿನಂತೆಯೇ ನಾವು ಕಾರ್ತಿ ಚಿದಂಬರಂ ಅವರಿಗೆ ಯುಎಸ್'ಡಿ 7 ಬಿಲಿಯನ್'ರಷ್ಟು ಹಣವನ್ನು ನೀಡಿದ್ದೆವು ಎಂದು ಐಎನ್ಎಕ್ಸ್ ಮೀಡಿಯಾ...

ನವದೆಹಲಿ: ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಪಿ. ಚಿದಂಬರಂ ಅವರು ನಮ್ಮನ್ನು ಕೇಳಿದ್ದರು, ಚಿದಂಬರಂ ಅವರ ಮಾತಿನಂತೆಯೇ ನಾವು ಕಾರ್ತಿ ಚಿದಂಬರಂ ಅವರಿಗೆ ಯುಎಸ್'ಡಿ 7 ಬಿಲಿಯನ್'ರಷ್ಟು ಹಣವನ್ನು ನೀಡಿದ್ದೆವು ಎಂದು ಶೀನಾ ಬೋರಾ ಪ್ರಕರಣದಲ್ಲಿ ಜೈಲು ಸೇರಿರುವ ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿಯವರು ಬುಧವಾರ ಹೇಳಿದ್ದಾರೆ. 
ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿಯವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. 
ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ ನಡೆಸುತ್ತಿದ್ದ ಮೀಡಿಯಾ ಕಂಪನಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ತೆರಿಗೆ ಇಲಾಖೆ 2007ರಲ್ಲಿ ಹೇಳಿತ್ತು. ಈ ಹಿನ್ನಲೆಯಲ್ಲಿ ಮೀಡಿಯಾ ಕಂಪನಿಗೆ ಅಗತ್ಯವಿದ್ದ ವಿದೇಶಿ ಬಂಡವಾಳಕ್ಕೆ ಹೂಡಿಕೆಗೆ ಅನುಮತಿ ನೀಡುವಂತೆ ಕೋರಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿದ್ದೆವು. ಈ ವೇಳೆ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಅವರು ತಿಳಿಸಿದ್ದರು ಎಂದು ಹೇಳಿಕೆಯಲ್ಲಿ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ