ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ 
ದೇಶ

ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ

ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.

ಕೊಯಮತ್ತೂರ್: ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.ಇದರಿಂದ ಮನನೊಂದ ಮಗ ನೇಣಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಐದನೇ ತರಗತಿ ಓದುತ್ತಿದ್ದ ಹತ್ತು ವರ್ಷದ ವಾಲಕ ನೇಣಿಗೆ ಶರಣಾಗಿದ್ದು ತಂದೆ ಸ್ನಾನ ಮಾಡುವಂತೆ ಗದರಿದ ಸಮಯದಲ್ಲಿ ಅವನು ತನ್ನ ಸ್ನೇಹಿತರೊಡನೆ ಆಟವಾಡುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
ಹಾಗೆ ಗದರಿದ ನಂತರ ಬಾಲಕ ಅರ್ಧ ಮನಸ್ಸಿನಿಂದ ಸ್ನಾನಕ್ಕಾಗಿ ಬಾತ್ ರೂಂ ಗೆ ತೆರಳಿದ್ದಾನೆ. ಅಲ್ಲಿ ಟವೆಲ್ ಹಾಗೂ ಅಪಿಪ್ ನ್ನು ಬಳಸಿ ನೇಣು ಬಿಗಿದುಕೊಂಡಿದ್ದಾನೆ. ಪಾಲಕರು ಮಗ ಎಷ್ಟು ಹೊತ್ತಾದರೂ ಬಾತ್ ರೂಂ ನಿಂದ ಹೊರಬರದೆ ಇದ್ದದ್ದು ಕಂಡು ಗಾಬರಿಯಾಗಿ ಬಾಗಿಲು ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಮಗನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಸತ್ತಿದ್ದು ವೈದ್ಯರು ಅದನ್ನು ದೃಢಪಡಿಸಿದ್ದರು. 
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ