ದೇಶ

ಶಿವಸೇನೆ ಮಾಜಿ ಕಾರ್ಪೋರೇಟರ್ ಹತ್ಯೆ: ಮಾಸ್ಟರ್ ಮೈಂಡ್ ಆರ್‌ಟಿಐ ಕಾರ್ಯಕರ್ತನ ಬಂಧನ

Vishwanath S
ಮುಂಬೈ: ಶಿವಸೇನೆ ಮಾಜಿ ಕಾರ್ಪೋರೇಟರ್ ಅಶೋಕ್ ಸಾವಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರ್‌ಟಿಐ ಕಾರ್ಯಕರ್ತನೋರ್ವನನ್ನು ಬಂಧಿಸಿದ್ದಾರೆ. 
ಅಶೋಕ್ ಸಾವಂತ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಅನಿಲ್ ವಾಘಮಾರೆ ಎಂಬಾತನನ್ನು ಬಂಧಿಸಲಾಗಿದ್ದು ಇತ ನಗರ ಹೊರವಲಯದ ಕಾಂದಿವಿಲಿಯಲ್ಲಿ ಪೌರ ಸೇವಾ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರವೊಂದನ್ನು ನಡೆಸುತ್ತಿದ್ದ ಎಂದು ಪೊಲೀಸ್ ಉಪ ಕಮಿಷನರ್ ವಿನಯ್ ರಾಥೋಡ್ ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಅನಿಲ್ ವಾಘಮೊರೆ ಬಂಧಿತ ನಾಲ್ಕನೇ ಆರೋಪಿಯಾಗಿದ್ದಾನೆ. ಸಾವಂತ್ ಗೂ ಮತ್ತು ವಾಘಮೊರೆಗೂ ಹಲವು ವಿಚಾರದಲ್ಲಿ ವೈಯಕ್ತಿಕ ದ್ವೇಷವಿದ್ದು ಸಾವಂತ್ ಕೊಲೆಗೆ ಯೋಜನೆ ಸಿದ್ಧಪಡಿಸಿದ್ದ ಎಂದು ವಿನಯ್ ರಾಥೋಡ್ ತಿಳಿಸಿದ್ದಾರೆ.  
SCROLL FOR NEXT