ಮಂಗಳವಾರ ಬರ್ಮೀರ್ ಉತ್ತರಲೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೊಂದಿಗೆ ಮಾತನಾಡಿದರು.
ಬರ್ಮೀರ್ (ರಾಜಾಸ್ಥಾನ): ರಾಜಾಸ್ಥಾನದ ಬರ್ಮೀರ್ ನಲ್ಲಿ ನಿರ್ಮಾಣವಾದ ತೈಲ ಸಂಸ್ಕರಣಾಗಾರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಈ ತೈಲ ಸಂಸ್ಕರಣೆ ಘಟಕದ ಕಾರಣದಿಂದ ರಾಜಸ್ಥಾನ, ನಿರ್ದಿಷ್ಟವಾಗಿ ರಾಜ್ಯದ ಪಶ್ಚಿಮ ಭಾಗಗಳ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವ್ಯಾಪಕ ಪ್ರಗತಿ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಸಹಯೋಗದೊಡನೆ ಈ ಘತಕ ನಿರ್ಮಾಣವಾಗಿದೆ. ಘಟಕದ ಒಟ್ಟು ಮೌಲ್ಯ 43,000 ಕೋಟಿ ರೂ. ಎನ್ನಲಾಗಿದೆ
ಈ ಯೋಜನೆಯಿಂದಾಗಿ ರಾಜ್ಯದಲ್ಲಿ ಉದ್ಯೋಗಾವಕಾಶ ಪ್ರಮಾಣದಲ್ಲಿ ಹೆಚ್ಚಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos