ದೇಶ

ಇಸ್ರೇಲ್ ನಿಂದ ಭಾರತಕ್ಕೆ ಗಾಲ್ ಮೊಬೈಲ್ ಗಿಪ್ಟ್

ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ ನೀಡಿದ್ದಾರೆ.

ಅಹಮದಾಬಾದ್; ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ  ನೀಡಿದ್ದಾರೆ.

ಈ ಮೊಬೈಲ್ ಗಾಲ್ ವಾಹನ  ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಬನಸ್ಕಾಂತ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.  ಅಹ್ಮದಾಬಾದಿನ ಡಿಯೋ ದೋಲೇರಾ ಗ್ರಾಮದಲ್ಲಿ ಸ್ಥಾಪಿಸಿರುವ ಐ ಕ್ರಿಯೆಟ್ ನೀರು ಶುದ್ಧೀಕರಣ ಕೇಂದ್ರದ ಉದ್ಘಾಟನಾ  ಸಮಾರಂಭದಲ್ಲಿ  ನರೇಂದ್ರಮೋದಿ ಹಾಗೂ ನೇತಾನ್ಯಾಹು ಪಾಲ್ಗೊಂಡರು. ನಂತರ ಅತ್ಯಾಧುನಿಕ ಬೀಜ ಉತ್ಪಾದನಾ  ಘಟಕ ಸ್ಥಾಪನೆ  ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು.

ಇದಕ್ಕೂ ಮುನ್ನ  ಬೆಂಜಮಿನ್ ನೇತಾನ್ಯಾಹು, ಅವರ ಪತ್ನಿ ಸಾರಾ ಅವರು ಅಹಮದಾಬಾದಿನಲ್ಲಿ ಪ್ರಧಾನಿ ನರೇಂದ್ರಮೋದಿಯೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆರಂಭಗೊಂಡ ರೋಡ್ ಶೋ ,ಸಬರಮತಿ ಆಶ್ರಮದವರೆಗೂ ಸುಮಾರು 8 ಕಿಲೋ ಮೀಟರ್ ದೂರ ಸಾಗಿತು. ಸಬರಮತಿ ಆಶ್ರಮದಲ್ಲಿ ಮಹಾತ್ಮಗಾಂಧಿ ಚರಕದಲ್ಲಿ ಹತ್ತಿದಾರ ನೇಯುವ ಮೂಲಕ ನೇತ್ಯಾನಹು ವಿಶಿಷ್ಠ ಅನುಭವ ಪಡೆದರು.ವೀಕ್ಷಕರ ಪುಸ್ತಕದಲ್ಲಿ ಸಹಿ ಹಾಕಿದ ನೇತಾನಾಹ್ಯು ದಂಪತಿ, ಭೇಟಿ ವೇಳೆ ಮಹಾನ್ ಮಾನವತಾವಾದಿ ಮಹಾತ್ಮಗಾಂಧಿ ಅವರ ತತ್ತ್ವ ಆದರ್ಶಗಳಿಂದ ಪ್ರಭಾವಿತನಾಗಿರುವುದಾಗಿ ಪುಸ್ತಕದಲ್ಲಿ ನಮೂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT