ಕಮಲ್ ಹಾಸನ್ ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡಿನ ಪ್ರಗತಿಗಾಗಿ ಅಬ್ದುಲ್ ಕಲಾಂ ಕನಸು ನನಸು ಮಾಡುವೇ: ಕಮಲ್ ಹಾಸನ್

ತಮಿಳುನಾಡಿನ ಪ್ರಗತಿಗಾಗಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೊಂದಿದ್ದ ಕನಸನ್ನು ನನಸು ಮಾಡುವುದಾಗಿ ಕಾಲಿವುಡ್ ಹೆಸರಾಂತ ನಟ ಕಮಲ್ ಹಾಸನ್ ಹೇಳಿದ್ದಾರೆ.

 ಚೆನ್ನೈ: ತಮಿಳುನಾಡಿನ ಪ್ರಗತಿಗಾಗಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ  ಅವರು ಹೊಂದಿದ್ದ ಕನಸನ್ನು ನನಸು ಮಾಡುವುದಾಗಿ ಕಾಲಿವುಡ್   ಹೆಸರಾಂತ ನಟ ಕಮಲ್ ಹಾಸನ್ ಹೇಳಿದ್ದಾರೆ.

ಬರುವ ತಿಂಗಳ 21ರಿಂದ ರಾಮನಾಥಪುರಂನ ಎಪಿಜೆ ಅಬ್ದುಲ್ ಕಲಾಂ ಅವರ ನಿವಾಸದಿಂದ  ರಾಜಕೀಯ  ಪ್ರವಾಸ ಆರಂಭಿಸಲಿದ್ದು, ಗುರಿ ಸಾಧನೆಗಾಗಿ ಮುನ್ನುಗ್ಗುವುದಾಗಿ  ತಮಿಳಿನ ವಾರಪತ್ರಿಕೆಯೊಂದಕ್ಕೆ ಅಂಕಣ ಬರೆದಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಮಾನದಲ್ಲಿ ಅಬ್ದುಲ್ ಕಲಾಂ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಕಮಲ್ ಹಾಸನ್ ನೆನಪು ಮಾಡಿಕೊಂಡಿದ್ದು, ಅವರ ಉತ್ತಮ ಗುಣಗಳನ್ನು ಕೊಂಡಾದಿದ್ದಾರೆ.  ರಾಮನಾಥಪುರಂ ತಮ್ಮ ಹುಟ್ಟೂರು ಆಗಿದ್ದು, ಅವಕಾಶಕ್ಕಾಗಿ ಕಲಾಂ ಅವರ ನಿವಾಸದಿಂದಲೇ ಪ್ರವಾಸ ಆರಂಭಿಸುವುದಾಗಿ ತಿಳಿಸಿದ್ದಾರೆ.

ಅಬ್ದುಲ್ ಕಲಾಂ ತಮಿಳುನಾಡಿಗಾಗಿ ಪ್ರಗತಿಗಾಗಿ ಹೊಂದಿದ್ದ ಹಲವು ಕನಸುಗಳನ್ನು ಬಿಟ್ಟು ಹೋಗಿದ್ದಾರೆ. ತಾವೂ ಕೂಡಾ ಕೆಲವೊಂದು ಚಿಂತನೆ ಹೊಂದಿದ್ದು,  ಅದನ್ನು  ಸಾಕಾರ ಮಾಡಲು ಪೂರ್ಣಾವಧಿ ಕೆಲಸ ಮಾಡುತ್ತೇನೆ. ಜನ ಕಲ್ಯಾಣವೇ ತಮ್ಮ ಗುರಿ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT