ಬಿಹಾರದ ಕಾಲಚಕ್ರ ಮೈದಾನ (ಸಾಂದರ್ಭಿಕ ಚಿತ್ರ) 
ದೇಶ

ಬೋಧ್ ಗಯಾದಲ್ಲಿ ಎರಡು ಬಾಂಬ್ ಪತ್ತೆ: ದಲೈಲಾಮಗೆ ಬಿಗಿ ಬಂದೋಬಸ್ತ್

ರಸಿದ್ಧ ಧಾರ್ಮಿಕ ಕೇಂದ್ರ ಬೋಧ್ ಗಯಾದಲ್ಲಿ ನಿನ್ನೆ ರಾತ್ರಿ ಎರಡು ಬಾಂಬ್ ಪತ್ತೆಯಾಗಿದ್ದು, ಬೌಧ ಧರ್ಮಗುರು ದಲೈಲಾಮ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ: ಪ್ರಸಿದ್ಧ ಧಾರ್ಮಿಕ ಕೇಂದ್ರ ಬೋಧ್ ಗಯಾದಲ್ಲಿ ನಿನ್ನೆ ರಾತ್ರಿ ಎರಡು ಬಾಂಬ್  ಪತ್ತೆಯಾಗಿದ್ದು, ಬೌಧ ಧರ್ಮಗುರು ದಲೈಲಾಮ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾ ಡಿಐಜಿ ವಿನಯ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾಲಚಕ್ರ ಮೈದಾನದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವಾಗ  ಸುಧಾರಿತ ಪ್ರಮಾಣದ ಎರಡು ಬಾಂಬ್ ಮಾದರಿಯ ಸ್ಪೋಟಕಗಳು ಪತ್ತೆಯಾಗಿವೆ ಎಂದು ಪಾಟ್ನಾವಲಯದ ಐಜಿಪಿ ಎನ್. ಹೆಚ್. ಖಾನ್  ಹೇಳಿದ್ದಾರೆ.

ಕಾಲಚಕ್ರ ಮೈದಾನದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಚಿಂತಕ ದಲೈಲಾಮ ಅವರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು,ಟಿಪ್ಪನ್ ಬಾಕ್ಸ್ ಮಾದರಿಯ ವಸ್ತುವಿನಲ್ಲಿ ಬಾಂಬ್ ಇಡಲಾಗಿತ್ತು,ಇದರಿಂದಾಗಿ ಭಕ್ತಾಧಿಗಳು ಕೆಲಕಾಲ ಆತಂಕಕ್ಕೊಳಗಾಗಿದ್ದರು ಎಂದು ಅವರು ಹೇಳಿದರು.

ದಲೈಲಾಮ ಅವರ ಭಾಷಣ ಮುಗಿದ ಕೂಡಲೇ ಬಾಂಬ್ ಸ್ಪೋಟಿಸುವ ಸಂಚು ಇದಾಗಿದ್ದು,  ಪರಿಶೀಲನೆ ವೇಳೆ ಸುಟ್ಟು ಹೋಗಿರುವ ಧರ್ಮೋಸ್ ಪ್ಲಾಸ್ಕ್ ವೊಂದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಜನವರಿ 1 ರಲ್ಲೇ ದಲೈಲಾಮ ಬೋಧ್ ಗಯಾಕ್ಕೆ ಆಗಮಿಸಿದ್ದು, ಒಂದು ತಿಂಗಳ ಕಾಲ ಉಪನ್ಯಾಸ ನಡೆಸುವ ಸಾಧ್ಯತೆ ಇದೆ. ಇತ್ತೀಚಿಗೆಷ್ಟೇ ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,  ಹಾಲಿವುಡ್ ನಟ ರಿಚರ್ಡ್ ಗೆರ್  ಸೇರಿದಂತೆ ಹಲವು ಮಂದಿ ಗಣ್ಯರು ದಲೈಲಾಮ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದರು.2013ರಲ್ಲಿ ಮಹಾಬೋದಿ ದೇವಾಲಯ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐವರು ನಾಗರಿಕರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT