ಸಂಗ್ರಹ ಚಿತ್ರ 
ದೇಶ

ದೆಹಲಿ ಉಪ ಚುನಾವಣೆ ನಡೆದರೆ 12 ಸ್ಥಾನ ಕಳೆದುಕೊಳ್ಳಲಿದೆ ಆಪ್‌: ಖಾಸಗಿ ಸಮೀಕ್ಷೆ

ಪ್ರಸ್ತುತ ಆಯೋಗ ಶಿಫಾರಸ್ಸು ಮಾಡಿರುವ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ತತ್ ಕ್ಷಣ ಉಪ ಚುನಾವಣೆ ನಡೆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎನ್ನಲಾಗಿದೆ.

ನವದೆಹಲಿ: ಪ್ರಸ್ತುತ ಆಯೋಗ ಶಿಫಾರಸ್ಸು ಮಾಡಿರುವ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ತತ್ ಕ್ಷಣ ಉಪ ಚುನಾವಣೆ ನಡೆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ  ಎನ್ನಲಾಗಿದೆ.
ಅತ್ತ 20 ಶಾಸಕರ ಅನರ್ಹತೆಗೆ ಶಿಫಾರಸ್ಸು ಮಾಡುವ ಮೂಲಕ ಕೇಂದ್ರ ಚುನಾವಣಾ ಆಯೋಗ ಆಪ್ ಗೆ ಶಾಕ್ ನೀಡಿದ ಬೆನ್ನಲ್ಲೇ ಇತ್ತ ಆರವಿಂದ್ ಕೇಜ್ರಿವಾಲ್ ತಂಡಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಚುನಾವಣಾ ಆಯೋಗದ  ನಿರ್ಧಾರ ಹೊರಬೀಳುತ್ತಿದ್ದಂತೆಯೇ ಇತ್ತ ಖಾಸಗಿ ಸುದ್ದಿವಾಹಿನಿ ಎಬಿಪಿ ನ್ಯೂಸ್ ಸಿ-ವೋಟರ್ ನೊಂದಿಗೆ ಕೈ ಜೋಡಿಸಿ ಸಂಭಾವ್ಯ ದೆಹಲಿ ಉಪ ಚುನಾವಣೆಯ ಕ್ಷಿಪ್ರ ಸಮೀಕ್ಷೆ ನಡೆಸಿದೆ. ಅದರಂತೆ ತತ್ ಕ್ಷಣ ದೆಹಲಿಯ 20  ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದರೆ ಆಪ್ ಸರ್ಕಾರ ತನ್ನ 20  ಸ್ಥಾನಗಳ ಪೈಕಿ ಬರೊಬ್ಬರಿ 12 ಸ್ಥಾನಗಳನ್ನು ಕಳೆದುಕೊಂಡು ಕೇವಲ 8 ಸ್ಥಾನಗಳಲ್ಲಿ ಮಾತ್ರ ಜಯ ದಾಖಲಿಸುವ ಸಾಧ್ಯತೆ ಇದೆ ಹೇಳಲಾಗಿುದೆ. 
ನಿನ್ನೆಯಷ್ಟೇ ಚುನಾವಣಾ ಆಯೋಗ ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನ ಶಾಸಕರಾದ ನರೇಶ್‌ ಯಾದವ್‌, ಸೋಮ್‌ದತ್‌, ಪ್ರವೀಣ್‌ ಕುಮಾರ್‌, ಜರ್ನೇಲ್‌ ಸಿಂಗ್‌ (ಇದೇ ಹೆಸರಿನ ಇಬ್ಬರು), ನಿತಿನ್‌ ತ್ಯಾಗಿ,  ಆದರ್ಶ ಶಾಸ್ತ್ರಿ, ಸಂಜೀವ್‌ ಝಾ, ಸುಖ್ವೀರ್‌ ಸಿಂಗ್‌, ಮದನ್‌ ಲಾಲ್‌, ಸರಿತಾ ಸಿಂಗ್‌, ಅಲ್ಕಾ ಲಾಂಬಾ, ರಾಜೇಶ್‌ ರಿಷಿ, ಅನಿಲ್‌ ಕುಮಾರ್‌ ಬಾಜಪೈ, ಮನೋಜ್‌ ಕುಮಾರ್‌, ಕೈಲಾಶ್‌ ಗೆಹ್ಲೋಟ್‌, ಅವತಾರ್‌ ಸಿಂಗ್‌, ವಿಜೇಂದ್ರ  ಗಾರ್ಗ್‌ ವಿಜಯ್‌, ರಾಜೇಶ್‌ ಗುಪ್ತಾ, ಶರದ್‌ ಕುಮಾರ್‌, ಶಿವ ಚರಣ್‌ ಗೋಯಲ್‌ ಸೇರಿದಂತೆ ಒಟ್ಟು 20 ಶಾಸರಕ ಅನರ್ಹತೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ.
ಒಂದೊಮ್ಮೆ ಆಪ್‌ ನ ಈ 20 ಶಾಸಕರು ಅನರ್ಹಗೊಂಡಲ್ಲಿ, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಲ್ಲಿ ಕೇಜ್ರಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಈ 20 ಸ್ಥಾನಗಳ ಪೈಕಿ ಆಪ್‌ 12 ಸೀಟು ಕಳೆದುಕೊಳ್ಳುವ  ಸಾಧ್ಯತೆ ಇದ್ದು, ಈ 12 ಸೀಟುಗಳಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್‌ 4 ಪಾಲಾಗಲಿದೆ ಎಂದು  ಎಂದು ಎಬಿಪಿ ನ್ಯೂಸ್‌ ಕ್ಷಿಪ್ರ ಸಮೀಕ್ಷೆ ಅಂದಾಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT