ಅಪಘಾತದಿಂದ ತೀವ್ರ ರಕ್ತಸ್ರಾವಗೊಂಡು ಸಹಾಯಕ್ಕಾಗಿ ಅಂಗಲಾಚಿದ್ದರೂ ಸ್ಪಂದಿಸದ ಪೊಲೀಸರು 
ದೇಶ

ಅಪಘಾತಕ್ಕೀಡಾದವರಿಗೆ ಸಹಾಯ ಮಾಡದ ಆರಕ್ಷಕರು: ಯುವಕರಿಬ್ಬರು ಸಾವು

ಅಪಘಾತದಿಂದ ತೀವ್ರ ರಕ್ತ ಸ್ರಾವವಾಗಿ ರಸ್ತೆ ಮೇಲೆ ಬಿದ್ದಿದ್ದ ಇಬ್ಬರು ಯುವಕರು , ಸಹಾಯಕ್ಕಾಗಿ ಅಂಗಲಾಚಿದ್ದರೂ ಪೆಟ್ರೋಲ್ ಕಾರಿನ ಸೀಟಿನ ಮೇಲೆ ರಕ್ತ ಬೀಳುತ್ತೆ ಅಂತಾ ಪೊಲೀಸರು ಸಹಾಯ ಮಾಡಿಲ್ಲ

ಶಹರಾನ್ ಪುರ;ಉತ್ತರ ಪ್ರದೇಶದ ಶಹರಾನ್ ಪುರದಲ್ಲಿ ಸಮಾಜ ರಕ್ಷಿಸುವ ಪೊಲೀಸರು ಹೃದಯ ಹೀನರಂತೆ ವರ್ತಿಸಿದ್ದಾರೆ. ಅಪಘಾತದಿಂದ ತೀವ್ರ ರಕ್ತ ಸ್ರಾವವಾಗಿ ರಸ್ತೆ ಮೇಲೆ ಬಿದ್ದಿದ್ದ ಇಬ್ಬರು ಯುವಕರು , ಸಹಾಯಕ್ಕಾಗಿ ಅಂಗಲಾಚಿದ್ದರೂ ಕಲ್ಲು ಹೃದಯದ ಪೊಲೀಸರು ನೆರವು ನೀಡಿಲ್ಲ. ಪೆಟ್ರೋಲ್ ಕಾರಿನ ಸೀಟಿನ ಮೇಲೆ ರಕ್ತ ಬೀಳುತ್ತೆ ಅಂತಾ ಕಾಲಹರಣ ಮಾಡಿದ್ದಾರೆ. ಇದರಿಂದಾಗಿ ಆ ಯುವಕರು ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 ಅರ್ಪಿತ್ ಖುರಾನ ಮತ್ತು ಸನ್ನಿ ಜಾರ್ಜ್ ಮತಪಟ್ಟು ದುರ್ದೈವಿಗಳು. ಇವರು ಚಲಾಯಿಸುತ್ತಿದ್ದ ಮೊಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ನೆರವು ನೀಡಿದ್ದು, ಪೊಲೀಸರ ಸಹಾಯಕ್ಕಾಗಿ ಪೋನ್ ಮಾಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮೂರು ಪೊಲೀಸರು , ಅಪಘಾತದಿಂದ ನರಳುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸದೆ ಅವರ ಸಾವಿಗೆ ಕಾರಣರಾಗಿದ್ದಾರೆ.

ಇದನ್ನು ನೋಡಿದ ಪ್ರತ್ಯೇಕ್ಷದರ್ಶಿಗಳು ಪೊಲೀಸರ ವರ್ತನೆಯನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸ್ಥಳದಲ್ಲಿ ಯಾವುದೇ ಕಾರಿಲ್ಲ.  ಆಸ್ಪತ್ರೆಗೆ ಸೇರಿಸಿ ಅಂತಾ ಯುವಕರು ಗೋಳಾಡಿದ್ದರೂ ಪೊಲೀಸರು ಸ್ಪಂದಿಸಿಲ್ಲ,

ಪರಿಣಾಮ ಆ ಪೊಲೀಸರನ್ನು  ಸೇವೆಯಿಂದ ಅಮಾನತುಗೊಂಡು ಮನೆ ಸೇರಿದ್ದಾರೆ.ಇದೊಂದು ದುರದೃಷ್ಟಕರ ಅಪಘಾತ. ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅವರನ್ನು ಸೇವೆಯಿಂದ ಅಮಾನತುಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಹರಾನ್ ಪುರ ವಲಯದ ಡಿಐಜಿ ಕೆ.ಎಸ್. ಇಮ್ಯಾನುವೆಲ್ ತಿಳಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT