ದೇಶ

ಕಣಿವೆ ಪ್ರದೇಶಗಳಲ್ಲಿ ಮೈ ನಡುಗಿಸುವ ಚಳಿ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತಗಾಳಿ ಆರ್ಭಟ ಮುಂದುವರೆದಿದೆ.ಮುಂದುವರೆದಿದೆ. ಸಾಮಾನ್ಯ ತಾಪಮಾನ ಕನಿಷ್ಠಮಟ್ಟಕ್ಕೆ ಇಳಿದಿದ್ದು, ವಿಪರೀತ ಚಳಿಯಿಂದಾಗಿ ಮೈ ತರಗುಟ್ಟುವಂತಾಗಿದೆ.

ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತಗಾಳಿ ಆರ್ಭಟ ಮುಂದುವರೆದಿದೆ.ಸಾಮಾನ್ಯ ತಾಪಮಾನ ಕನಿಷ್ಠಮಟ್ಟಕ್ಕೆ ಇಳಿದಿದ್ದು, ವಿಪರೀತ ಚಳಿಯಿಂದಾಗಿ ಮೈ ತರಗುಟ್ಟುವಂತಾಗಿದೆ.

ಕಾರ್ಗಿಲ್, ಲಡಕ್ ,ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ರಾತ್ರಿ -18.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಶ್ರೀನಗರ ಹವಾಮಾನ ಇಲಾಖೆ ತಿಳಿಸಿದೆ.

ಎರಡನೇ ಅತ್ಯಂತ ಕಡಿಮೆ ಉಷ್ಣಾಂಶ ಪ್ರದೇಶವಾದ ಲೇಹ್ ನಲ್ಲಿ -14.3 ಡಿಗ್ರಿ ಸೆಲ್ಸಿಯಸ್, ಶ್ರೀಗನರದಲ್ಲಿ -4.5 ಡಿಗ್ರಿ ಸೆಲ್ಸಿಯಸ್ , ಉತ್ತರ ಕಾಶ್ಮೀರದಲ್ಲಿ -4.9 ಡಿಗ್ರಿ,, ಕುಪ್ವಾರದಲ್ಲಿ -4. 9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆರೋಗ್ಯ ರೆಸಾರ್ಟ್ ಗೆ ಹೆಸರಾಗಿರುವ ಪಾಹಲ್ಗಾಮಾದಲ್ಲಿ ನಿನ್ನೆ ರಾತ್ರಿ -5.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ  ದ್ವಿಪ್ರದೇಶಗಳಲ್ಲಿ ಅಲ್ಪಪ್ರಮಾಣದ ಮಳೆ ಹಾಗೂ ಮಂಜು ಬೀಳುವ ಸಾಧ್ಯತೆ ಇದೆ  ಚಳಿಗಾಲದ 40 ದಿನಗಳ ಈ ಅವಧಿಯಲ್ಲಿ ಕಾಶ್ಮೀರದಲ್ಲಿ  ಉಷ್ಣಾಂಶದಲ್ಲಿ ಏರುಪೇರಾಗಿ ಆಗ್ಗಾಗೆ ಮಂಜು ಬೀಳುತ್ತಿರುತ್ತದೆ ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT