ಸಾಕು ಪೋಷಕರೊಂದಿಗೆ ಬೊಡೊ ಮತ್ತು ಮುಸ್ಲಿಂ ಪೋಷಕರು 
ದೇಶ

ಹುಟ್ಟಿದಾಗಲೇ ಆಸ್ಪತ್ರೆಯಲ್ಲಿ ಅದಲುಬದಲಾದ ಮಕ್ಕಳು: ಈಗ ಬದಲಾಯಿಕೊಳ್ಳಲು ಪೋಷಕರ ನಕಾರ!

ಇದೊಂತರಾ ಸಿನಿಮಾ ಕಥೆಯಂತಿದೆ. ಆದರೆ ಅಸ್ಸಾಂನ ಹಳ್ಳಿಯೊಂದರಲ್ಲಿ ನಡೆದ ಘಟನೆ, ಹಿಂದೂ ಮುಸ್ಲಿಂ ಐಕ್ಯತೆಗೆ ಒಂದು ಉತ್ತಮ ಉದಾಹರಣೆ ಎನ್ನಬಹುದು...

ಗುವಾಹಟಿ: ಇದೊಂತರಾ ಸಿನಿಮಾ ಕಥೆಯಂತಿದೆ. ಆದರೆ ಅಸ್ಸಾಂನ ಹಳ್ಳಿಯೊಂದರಲ್ಲಿ ನಡೆದ ಘಟನೆ, ಹಿಂದೂ ಮುಸ್ಲಿಂ ಐಕ್ಯತೆಗೆ ಒಂದು ಉತ್ತಮ ಉದಾಹರಣೆ ಎನ್ನಬಹುದು
ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳು ಆಕಸ್ಮಿಕವಾಗಿ ಅದಲು ಬದಲು ಆಗಿದ್ದರೂ ಜಗಳವಾಡದೆ ಸಾಕು ಪೋಷಕರೊಂದಿಗೇ ಜೀವನ ನಡೆಸಲು ಎರಡೂ ಕುಟುಂಬಗಳು ಒಪ್ಪಿದ ಅಪರೂಪದ ಘಟನೆಯಿದು.
ಅಸ್ಸಾಂನ ಮಂಗಲ್ಡೊಯ್ ಜಿಲ್ಲೆಯಿಂದ 20 ಕಿಲೋ ಮೀಟರ್ ದೂರದಲ್ಲಿ ಹಳ್ಳಿಯೊಂದರಲ್ಲಿ 2015ರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮಗು ಬುಡಕಟ್ಟು ಬೊಬೊ ಪೋಷಕರಿಗೆ ಮತ್ತು ಇನ್ನೊಂದು ಮಂಗಲ್ಡೊಯ್ ಪಟ್ಟಣದ ಮುಸ್ಲಿಂ ದಂಪತಿಗೆ ಮಗು ಹುಟ್ಟಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿಯಿಂದ ಶಿಶುಗಳು ಅದಲು ಬದಲಾದವು. 
ಕೆಲ ಸಮಯಗಳು ಕಳೆದ ನಂತರ ಪೋಷಕರಿಗೆ ವಿಷಯ ಗೊತ್ತಾಯಿತು. ಆದರೆ ಇಬ್ಬರು ಮಕ್ಕಳ ಪೋಷಕರು ಜಗಳವಾಡಲಿಲ್ಲ. ಬುಡಕಟ್ಟು ಜನಾಂಗದ ಮಗುವಿನ ತಂದೆ ಅನಿಲ್ ಬೊಡೊ ಮತ್ತು ಸಹಬುದ್ದೀನ್ ಅಹ್ಮದ್ ಅಸ್ಸಾಂ ಕೋರ್ಟ್ ಗೆ ಅಫಿಡವಿಟ್ಟು ಸಲ್ಲಿಸಿ ತಮ್ಮ ಮಗುವನ್ನು ಅದಲು ಬದಲು ಮಾಡಿಕೊಳ್ಳುವುದಿಲ್ಲ. ಮಕ್ಕಳು ದೊಡ್ಡವರಾದ ನಂತರ ತಾವಾಗಿಯೇ ತಮ್ಮ ಸ್ವಂತ ಪೋಷಕರ ಜೊತೆ ಹೋಗುತ್ತೇವೆ ಎಂದರೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದರಿಂದ ಕೋರ್ಟ್ ಸಮ್ಮತಿ ಸೂಚಿಸಿದೆ.
ಅಹ್ಮದ್ ಶಾಲಾ ಶಿಕ್ಷಕರಾಗಿದ್ದು ಬೊಡೊ ರೈತರು. ಇಬ್ಬರೂ ಅಸ್ಸಾಂನ ಮಂಗಲ್ಡೊಯ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದ ಅಹ್ಮದ್, ಮಗು ದೊಡ್ಡವನಾಗುತ್ತಾ ಹೋದಂತೆ ಬುಡಕಟ್ಟು ಜನಾಂಗದವರ ಚಹರೆ ಕಂಡು ನಮಗೆ ಸಂಶಯ ಬಂದಿತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಕ್ಕೆ ಆಸ್ಪತ್ರೆಯ ದಾಖಲೆ ನೋಡಿ ಬುಡಕಟ್ಟು ಮಹಿಳೆಗೆ ಹುಟ್ಟಿದ ಮಗು ಎಂದು ಗೊತ್ತಾಯಿತು. ಒಂದೇ ಸಮಯಕ್ಕೆ ಒಂದೇ ವಾರ್ಡ್ ನಲ್ಲಿ ತಮ್ಮ ಪತ್ನಿ ಮತ್ತು ಇನ್ನೊಂದು ಬುಡಕಟ್ಟು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಾನು ಬುಡಕಟ್ಟು ಕುಟುಂಬವನ್ನು ಸಂಪರ್ಕಿಸಿದೆ. ಅವರು ಕೂಡ ಗೊಂದಲದಲ್ಲಿದ್ದರು. ಕೊನೆಗೆ ಇಬ್ಬರೂ ಡಿಎನ್ಎ ಪರೀಕ್ಷೆ ಮಾಡಿಸಲು ಒಪ್ಪಿಕೊಂಡಿವೆ. ಪರೀಕ್ಷೆಯಲ್ಲಿ ದೃಢವಾಯಿತು ಎಂದರು ಅಹ್ಮದ್.
ಎರಡೂ ಕುಟುಂಬಗಳು ಪೊಲೀಸ್ ದೂರು ನೀಡಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷತನದಿಂದ ಶಿಶುಗಳು ಅದಲು ಬದಲಾಗಿವೆ ಎಂದು ದೂರು ನೀಡಿದರು. ಆದರೆ ಆರೋಗ್ಯ ಇಲಾಖೆ ಇಬ್ಬರು ನರ್ಸ್ ಗಳನ್ನು ವರ್ಗಾಯಿಸಿ ಕೈ ತೊಳೆದುಕೊಂಡಿತು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ದರ್ರಂಗ್ ಉಪ ಆಯುಕ್ತ ಎ.ಕೆ.ಬರ್ಮನ್ ತಿಳಿಸಿದ್ದು, ಫೆಬ್ರವರಿ 10ರ ವೇಳೆಗೆ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT