ದೆಹಲಿಯ ಅಮರ್ ಜ್ಯೋತಿಯಲ್ಲಿ ದೇಶದ ಮೂರು ಸೇನೆಗಳ ಮುಖ್ಯಸ್ಥರೊಂದಿಗೆ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ 
ದೇಶ

69ನೇ ಗಣರಾಜ್ಯೋತ್ಸವ:ಹುತಾತ್ಮ ಯೋಧರಿಗೆ ಗೌರವ ನಮನ, ಆಸಿಯಾನ್ ನಾಯಕರು ಭಾಗಿ

ಅಭೂತಪೂರ್ವ ಭದ್ರತೆಯೊಂದಿಗೆ ಆಸಿಯಾನ್ ದೇಶಗಳ 10 ನಾಯಕರ ಉಪಸ್ಥಿತಿಯಲ್ಲಿ ದೆಹಲಿಯ ರಾಜಪಥ್ ನಲ್ಲಿ ದೇಶದ 69ನೇ ಗಣರಾಜ್ಯೋತ್ಸವ .....

ನವದೆಹಲಿ: ಅಭೂತಪೂರ್ವ ಭದ್ರತೆಯೊಂದಿಗೆ ಆಸಿಯಾನ್ ದೇಶಗಳ 10 ನಾಯಕರ ಉಪಸ್ಥಿತಿಯಲ್ಲಿ ದೆಹಲಿಯ ರಾಜಪಥ್ ನಲ್ಲಿ ದೇಶದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭಗೊಂಡಿತು. ನಂತರ ಆಕರ್ಷಕ ಪಥಸಂಚಲನ ನಡೆಯಿತು. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮ್ ಮತ್ತು ಮೂವರು ಅತಿಥಿಗಳ ಸಮ್ಮುಖದಲ್ಲಿ ಹುತಾತ್ಮ ಯೋಧರಿಗೆ ಅಮರ್ ಜ್ಯೋತಿಯಲ್ಲಿ ಗೌರವ ನಮನ ಸಲ್ಲಿಸಿದರು.
ಇದೀಗ ದೆಹಲಿಯ ರಾಜಪಥ್ ನಲ್ಲಿ ದೇಶದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ಮೆರೆಯುವ ಅನೇಕ ಪ್ರದರ್ಶನಗಳು ನಡೆಯುತ್ತಿವೆ. ಜನರು ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇಂದಿನ ಗಣರಾಜ್ಯೋತ್ಸವ ದಿನದ ಮತ್ತೊಂದು ಆಕರ್ಷಣೆ ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತ ದೇಶದ ಐತಿಹಾಸಿಕ, ನಾಗರಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ತೋರಿಸುವ ಸ್ಥಬ್ಧಚಿತ್ರಗಳು.

ಇದೀಗ ವಿವಿಧ ರಾಜ್ಯಗಳು ತಮ್ಮ ಭೌಗೋಳಿಕ, ಸಾಂಸ್ಕೃತಿರ ವೈವಿಧ್ಯಗಳನ್ನು ತೋರಿಸುವ ಸ್ಥಬ್ಧಚಿತ್ರಗಳು ಸಾಗುತ್ತಿವೆ. ಈ ಬಾರಿ ಕರ್ನಾಟಕದ ವನ್ಯಮೃಗಗಳನ್ನು ವೈಭವವನ್ನು ತೋರಿಸುವ ಸ್ಥಬ್ಧಚಿತ್ರ ದೆಹಲಿಯ ರಾಜಪಥ್ ನಲ್ಲಿ ಪ್ರದರ್ಶನಗೊಂಡಿದೆ.
ಈ ವರ್ಷ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಬ್ಧಚಿತ್ರಗಳ ಮೂಲಕ ಸಾಗುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT