ಅತ್ಯಾಚಾರ 
ದೇಶ

ಆಯಸ್ಸು ಹೆಚ್ಚಿಸುವುದಾಗಿ ಹೇಳಿ ಯುವತಿಯನ್ನು ಅತ್ಯಾಚರಿಸಿದ ನಕಲಿ ಬಾಬಾ ಬಂಧನ

ಮುಂಬೈನಲ್ಲಿ ನಕಲಿ ಬಾಬಾ ಓರ್ವ ಆಯಸ್ಸು ಹೆಚ್ಚಿಸುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಎರಡು ಬಾರಿ ಅತ್ಯಾಚಾರ ವೆಸಗಿದ್ದು ಆತನನ್ನು ಪೊಲೀಸರು...

ಮುಂಬೈ: ಮುಂಬೈನಲ್ಲಿ ನಕಲಿ ಬಾಬಾ ಓರ್ವ ಆಯಸ್ಸು ಹೆಚ್ಚಿಸುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಎರಡು ಬಾರಿ ಅತ್ಯಾಚಾರ ವೆಸಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. 
ಜನವರಿ 14ರಂದು ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಅತ್ಯಾಚರ ಸಂತ್ರಸ್ತ ಯುವತಿ ದೂರಿನ ಹಿನ್ನೆಲೆಯಲ್ಲಿ ನಕಲಿ ಬಾಬಾ ಧನಂಜಯ್ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ. 
ಧನಂಜಯ್ ಮಿಶ್ರಾ ದೂರದಾರ ಯುವತಿ ತಂದೆಯ ಸ್ನೇಹಿತರ ಮನೆಯಲ್ಲಿ ನೆಲೆಸಿದ್ದ. ಜನವರಿಯ ಎರಡನೇ ವಾರದಲ್ಲಿ ಸಂತ್ರಸ್ತೆಯ ಮನೆಗೆ ಬಂದಿದ್ದ ಧನಂಜಯ್ ಎಲ್ಲರ ಅಂಗೈಗಳನ್ನು ನೋಡಿ ಹೋಗಿದ್ದ. ನಂತರ ಅವರ ಮನೆಗೆ ಒಂದೆರಡು ಬಾರಿ ಭೇಟಿ ಮಾಡಿದ್ದಾನೆ. ನಂತರ ಜನವರಿ 14ರಂದು ಸಂತ್ರಸ್ತೆಯ ಮನೆಗೆ ಬಂದ ನಕಲಿ ಬಾಬಾ ಆಯಸ್ಸು ಹೆಚ್ಚಿಸಲು ಪೂಜೆಯನ್ನು ಮಾಡಬೇಕು. ಪೂಜೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒಂದು ಕೋಣೆಯಲ್ಲಿ ಸಿದ್ಧಪಡಿಸುವಂತೆ ಯುವತಿಗೆ ಹೇಳಿದ್ದಾನೆ. 
ಕೋಣೆಯಲ್ಲಿ ಪೂಜೆಗೆ ಕುಳಿತಾಗ ನಕಲಿ ಬಾಬಾ ನನ್ನನ್ನು ವಶೀಕರಣ ಮಾಡಿ ತನ್ನ ಬಟ್ಟೆಗಳನ್ನು ಬಿಟ್ಟಿ ಅದೇ ರೀತಿ ಮಾಡುವಂತೆ ಹೇಳಿದ ನಾನು ಅದೇ ರೀತಿ ಮಾಡಿದೆ. ನಂತರ ತನ್ನ ತೊಡೆಯ ಮೇಲೆ ಕುಳಿತು ಮಂತ್ರವನ್ನು ಓದಬೇಕೆಂದು ಹೇಳಿ ನನ್ನ ಮೇಲೆ ಅತ್ಯಾಚಾರ ನಡೆಸಿದ ನಂತರ ನನ್ನ ತಂಗಿಯನ್ನು ಕೋಣೆಗೆ ಕಳಿಸುವಂತೆ ಹೇಳಿದ ಆದರೆ ನನ್ನ ತಂಗಿ ಆತ ಹೇಳಿದಂತೆ ಕೇಳದಿದ್ದಕ್ಕೆ ಶಾಪ ಹಾಕಿ, ನಾನು ಹೇಳಿದಂತೆ ಮಾಡದಿದ್ದರೆ ಶೀಘ್ರದಲ್ಲೇ ಸಾಯುತ್ತೀಯಾ ಎಂದು ಹೇಳಿ ಹೋಗಿದ್ದ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 
ಜನವರಿ 18ರಂದು ಪೋಷಕರಿಗೆ ಇಬ್ಬರು ಯುವತಿಯರು ನಡೆದ ವಿಚಾರವನ್ನು ತಿಳಿಸಿದ್ದಾರೆ. ನಂತರ ಪೋಷಕರು ಆಂಟೋಪ್ ಹಿಲ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT