ಸಾಂದರ್ಭಿಕ ಚಿತ್ರ 
ದೇಶ

ಪತ್ರಕರ್ತರು ನ್ಯಾಯಾಲಯದೊಳಗೆ ಮೊಬೈಲ್ ಕೊಂಡೊಯ್ಯಲು ಸುಪ್ರೀಂ ಅನುಮತಿ

ಮಾನ್ಯತೆ ಪಡೆದ ಅಥವಾ ಪಡೆಯದೆ ಇರುವ ಪತ್ರಕರ್ತರು ನ್ಯಾಯಾಲಯದೊಳಗೆ ಮೊಬೈಲ್ ಕೊಂಡೊಯ್ಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ. ಮೊಬೈಲ್ ಗಳನ್ನು ಸೈಲೆಂಟ್ ಮೊಡ್ ನಲ್ಲಿ ಇಡುವಂತೆ ಸೂಚನೆ ನೀಡಲಾಗಿದೆ.

ನವದೆಹಲಿ: ಮಾನ್ಯತೆ ಪಡೆದ ಅಥವಾ ಪಡೆಯದೆ ಇರುವ ಪತ್ರಕರ್ತರು ನ್ಯಾಯಾಲಯದೊಳಗೆ  ಮೊಬೈಲ್ ಕೊಂಡೊಯ್ಯಲು ಸುಪ್ರೀಂಕೋರ್ಟ್  ಅನುಮತಿ ನೀಡಿದೆ. ಆದರೆ. ಮೊಬೈಲ್ ಗಳನ್ನು ಸೈಲೆಂಟ್ ಮೊಡ್ ನಲ್ಲಿ ಇಡುವಂತೆ  ಸೂಚನೆ ನೀಡಲಾಗಿದೆ.

ಪೋನ್ ಬಳಕೆದಾರರಿಂದ ಯಾವುದೇ ರೀತಿಯ ಅಡಚಣೆ ಉಂಟಾದ್ದರೆ ಅವುಗಳನ್ನು  ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಮೊಬೈಲ್ ಪೋನ್ ಬಳಕೆಗೆ ಅವಕಾಶ ನೀಡುವ ಸುತ್ತೋಲೆಯನ್ನು ಸುಪ್ರೀಂಕೋರ್ಟಿನಲ್ಲಿ ಇಂದು  ಮೊದಲಿಗೆ ಓದಲಾಯಿತು. ಮಾಧ್ಯಮ ಪ್ರತಿನಿಧಿಗಳಿಗೆ  ಮೊಬೈಲ್ ಬಳಕೆಗೆ ಅನುಮತಿ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದ್ದು, ನೋಂದಣಿಯಾದ ಆರು ತಿಂಗಳ ಪಾಸ್ ಹೊಂದಿರುವವರು ನ್ಯಾಯಾಲಯದೊಳಗೆ ಪೋನ್ ಕೊಂಡೊಯ್ದು ಸೈಲೆಂಟ್ ಮೊಡ್ ನಲ್ಲಿಡಬೇಕು ಎಂದು  ತಿಳಿಸಲಾಯಿತು.

ಇದೇ ಮೊದಲ ಬಾರಿಗೆ ವಿಭಾಗೀಯ  ನ್ಯಾಯಾಲಯ  ನ್ಯಾಯಾಲಯದೊಳಗೆ ಮೊಬೈಲ್ ಪೋನ್ ಬಳಕೆ ಅವಕಾಶ ನೀಡಿದೆ. ಇದರಿಂದ ಪತ್ರಕರ್ತರು ನ್ಯಾಯಾಲಯದ ಕಾರ್ಯಕಲಾಪಗಳನ್ನು ಕ್ಷಿಪ್ರವಾಗಿ ವರದಿ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT